Bridge Course 2025-26: ಸೇತುಬಂಧ ಕಾರ್ಯಕ್ರಮಕ್ಕೆ ಸಂಬಂಧಿಸಿದ ಬುನಾದಿ ಸಾಮರ್ಥ್ಯಗಳು, ಮಾದರಿ ಪ್ರಶ್ನೆಪತ್ರಿಕೆಗಳು, ಚಟುವಟಿಕೆಗಳು

Bridge Course 2025-26: ಸೇತುಬಂಧ ಕಾರ್ಯಕ್ರಮಕ್ಕೆ ಸಂಬಂಧಿಸಿದ ಬುನಾದಿ ಸಾಮರ್ಥ್ಯಗಳು, ಮಾದರಿ ಪ್ರಶ್ನೆಪತ್ರಿಕೆಗಳು, ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಕೇವಲ ಮಾದರಿಗಾಗಿ ಮಾತ್ರ ನೀಡಲಾಗಿದ್ದು, ಶಿಕ್ಷಕರು ವಿದ್ಯಾರ್ಥಿಗಳು ಬಳಸಿಕೊಳ್ಳಬಹುದು

Bridge Course 2025-26: “ಸೇತುಬಂಧ”

▪️ಬದಲಾವಣೆಯು ಪ್ರಗತಿಯ ಸಂಕೇತ

ಶಿಕ್ಷಕರರ ಮನೋಭಾವನೆ ಬದಲಾಗದ ಹೊರತು ಶಿಕ್ಷಣದಲ್ಲಿ ಬದಲಾವಣೆ ಸಾಧ್ಯವಿಲ್ಲ.

▪️ಕಲಿಯುವ ವಯಸ್ಸಿನ ಎಲ್ಲಾ ಮಕ್ಕಳು ಶಾಲೆಗೆ ದಾಖಲಾಗಬೇಕು.
▪️ದಾಖಲಾದ ಮಕ್ಕಳು ಶಾಲೆಯಲ್ಲಿಯೇ ಉಳಿಯಬೇಕು.
▪️ಶಾಲೆಯಲ್ಲಿ ಉಳಿದ ಮಕ್ಕಳಿಗೆ ಗುಣಾತ್ಮಕ ಮತ್ತು ಪ್ರಭುತ್ವಮಟ್ಟದ ಕಲಿಕೆ ಆಗಬೇಕು.

▪️” ವಿದ್ಯಾರ್ಥಿಗಳಲ್ಲಿ ಕಂಡುಬರುತ್ತಿರುವ ಕಲಿಕಾ ದೋಷಗಳು ಹಾಗೂ ಕಲಿಕಾ ಕಂದರಗಳು.

▪️ವಿದ್ಯಾರ್ಥಿಗಳು ಒಂದು ಶೈಕ್ಷಣಿಕ ಹಂತ ಮುಗಿಸಿದ ನಂತರ ಆ ಶೈಕ್ಷಣಿಕ ಹಂತದಲ್ಲಿ ಗಳಿಸಬೇಕಾಗಿರುವ ಸಾಮರ್ಥ್ಯಗಳನ್ನು ಗಳಿಸದೆ ಮುಂದಿನ ಶೈಕ್ಷಣಿಕ ಹಂತಕ್ಕೆ ಬರುತ್ತಿರುವುದು.

▪️ಇದು ಕಲಿಕಾ ಪ್ರಗತಿಗೆ ತೊಡಕಾಗಿದ್ದು, ಇದನ್ನು ಪರಿಹರಿಸಲು ‘ಸೇತುಬಂಧ ಶಿಕ್ಷಣ’ವನ್ನು ಜಾರಿಗೊಳಿಸಿ, ಕಡ್ಡಾಯಗೊಳಿಸಿ, ನಿರ್ದೇಶಿಸಲಾಗಿದೆ.

▪️ಶಾಲಾ ಶೈಕ್ಷಣಿಕ ಯೋಜನೆಯಲ್ಲಿ ಇದಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ.

1. ‘ಸೇತುಬಂಧ ಶಿಕ್ಷಣ’ ಎಂದರೇನು?

ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಚಿಕಿತ್ಸಾರೂಪದಲ್ಲಿ ನಶ್ವೇತನವಾಗಿ ಮಕ್ಕಳ ಕಲಿಕಾ ಮಟ್ಟವನ್ನು ಗುರುತಿಸಿ ಮುಂದಿನ ಕಲಿಕೆಗೆ ಸಿದ್ಧಗೊಳಿಸುವ ಚಟುವಟಿಕೆಯೇ ‘ಸೇತುಬಂಧ ಶಿಕ್ಷಣ’.

ಸೇತುಬಂಧ’ ಪದದ ಅರ್ಥ. ಸೇತು ಬಂಧ ಪದವು ‘ಸೇತು’ ಮತ್ತು ‘ಬಂಧ’ ಎಂಬ ಎರಡು ಪದಗಳಿಂದ ಕೂಡಿದೆ. ‘ಸೇತು’ ಎಂದರೆ ಎರಡು ದಡಗಳ ನಡುವಿನ ಸಂಪರ್ಕ ಸಾಧನ ಎಂದು ಅರ್ಥ.

ಶೈಕ್ಷಣಿಕ ಅರ್ಥದಲ್ಲಿ ಹೇಳುವುದಾದರೆ ಹಿಂದಿನ ಸಾಧನೆ ಮತ್ತು ಮುಂದಿನ ಗುರಿಗಳ ನಡುವೆ ಸಂಬಂಧ ಕಲ್ಪಿಸುವುದು. ಕಲಿತಿರುವುದರ ಹಾಗೂ ಕಲಿಯಬೇಕಾಗಿರುವುದರ ನಡುವೆ ಸಂಬಂಧ ಕಲ್ಪಿಸುವುದು ಎಂದು ಅರ್ಥೈಸಬಹುದಾಗಿದೆ.

1. ‘ಸೇತುಬಂಧ ಶಿಕ್ಷಣ’ ಎಂದರೇನು?

ಸೇತುಬಂಧ ಶಿಕ್ಷಣವೆಂದರೆ “ಒಂದು ತರಗತಿಗೆ ಪ್ರವೇಶ ಪಡೆದ ಮಗುವು ಹಿಂದಿನ ತರಗತಿಯಲ್ಲಿ ಗಳಿಸಿದ ಸಾಮರ್ಥ್ಯ ಕಲಿಕೆಯ ಗುಣದೋಷಗಳನ್ನು ಗುರುತಿಸಿ ಮುಂದಿನ ಕಲಿಕೆಗೆ ಸಿದ್ಧಗೊಳಿಸುವ ಚಟುವಟಿಕೆ”.

2. ಸೇತುಬಂಧ ಶಿಕ್ಷಣ ಏಕೆ ಬೇಕು?

ವಿದ್ಯಾರ್ಥಿಯು ಹಲವು ಕಾರಣಗಳಿಂದ ಹಿಂದಿನ ತರಗತಿಯ ಸಾಮರ್ಥ್ಯಗಳನ್ನು ಪ್ರಭುತ್ವಮಟ್ಟದಲ್ಲಿ ಗಳಿಸಿರುವುದಿಲ್ಲ.

▪️ವಿದ್ಯಾರ್ಥಿಗಳಲ್ಲಿ ವಿಷಯ ಜ್ಞಾನ ಮತ್ತು ಕೌಶಲಗಳ ದೃಷ್ಠಿಯಿಂದ ತುಂಬ ದೋಷ ಹಾಗೂ ಕೊರತೆಗಳು ಕಂಡುಬರುತ್ತಿವೆ.

2. ಸೇತುಬಂಧ ಶಿಕ್ಷಣ ಏಕೆ ಬೇಕು?

▪️ಹಲವು ಕಾರಣಗಳಿಂದ ಕಲಿಕಾ ಕೊರತೆ ಮತ್ತು ದೋಷಗಳನ್ನು ಹೊತ್ತು ಬಂದಿರುವ ವಿದ್ಯಾರ್ಥಿಗಳನ್ನು ಗುರುತಿಸಿ, ಮಾರ್ಗದರ್ಶನ ನೀಡಿ, ಕಲಿಕೆಗೆ ಸಿದ್ಧಗೊಳಿಸದೆ, ಮುಂದಿನ ಕಲಿಕಾ ಚಟುವಟಿಕೆಗಳನ್ನು ಪ್ರಾರಂಭಿಸಿದರೆ ಕಲಿಕೆ ಪರಿಣಾಮಕಾರಿಯಾಗುವುದಿಲ್ಲ.

▪️ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಸರಿಯಾದ ಮಾರ್ಗದರ್ಶನ ನೀಡದಿದ್ದರೆ ಅವರು ತಾವು ಕಲಿಯದೆ ಇತರೆ ವಿದ್ಯಾರ್ಥಿಗಳ ಕಲಿಕೆಗೆ ಕಂಟಕಪ್ರಾಯರಾಗಿ ತರಗತಿಯಲ್ಲಿ ಗೊಂದಲವನ್ನುಂಟುಮಾಡಿ ಅಶಿಸ್ತಿಗೆ ಕಾರಣರಾಗುತ್ತಾರೆ.

2. ಸೇತುಬಂಧ ಶಿಕ್ಷಣ ಏಕೆ ಬೇಕು?

” ಶಿಕ್ಷಕನು ತಾನು ಕಲಿಸಬೇಕಾಗಿರುವ ವಿದ್ಯಾರ್ಥಿಗಳ ಕಲಿಕಾ ಮಟ್ಟ, ಗುಣ ದೋಷಗಳನ್ನು ತಿಳಿದು ಸೂಕ್ತ ಪರಿಹಾರ ಮಾರ್ಗೋಪಾಯಗಳನ್ನು ಕೈಗೊಳ್ಳಲು ಸೂಕ್ತ ಮಾರ್ಗದರ್ಶನ ನೀಡುತ್ತದೆ.

ಈ ವಿವಿಧ ಪರಿಸರದಿಂದ ಬರುವ ಮಕ್ಕಳ ಕಲಿಕಾ ಮಟ್ಟದಲ್ಲಿ ಕಲಿಕಾ ಅಂತರಗಳಿವೆ. ಆ ಕಲಿಕಾ ಅಂತರವನ್ನು ಕಡಿಮೆ ಮಾಡಬೇಕಾಗಿದೆ.

3. ಸೇತುಬಂಧ ಶಿಕ್ಷಣವನ್ನು ಹೇಗೆ ಕಾರ್ಯರೂಪಕ್ಕೆ ತರಲಾಗುತ್ತದೆ?

▪️ಸೇತು ಬಂಧ ಶಿಕ್ಷಣವನ್ನು ಮೂರು ಹಂತಗಳಲ್ಲಿ ಕಾರ್ಯರೂಪಕ್ಕೆ ತರಲು ನಿರ್ದೇಶಿಸಲಾಗಿದೆ.

1. ಪೂರ್ವ ಪರೀಕ್ಷೆ / ನೈದಾನಿಕ ಪರೀಕ್ಷೆ (Pre Test / Diagnostic Test)

2. ಪರಿಹಾರ ಬೋಧನೆ (Remedial Teaching)

3. ಉತ್ತರ ಪರೀಕ್ಷೆ / ಸಾಫಲ್ಯ ಪರೀಕ್ಷೆ (Post Test / Achievement Test)

ಸೇತುಬಂಧ ಸಂಪನ್ಮೂಲಗಳನ್ನು ಈ ಕೆಳಗೆ ಮಾದರಿಗಾಗಿ ನೀಡಲಾಗಿದೆ.

CLICK HERE TO DOWNLOAD

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!