SSLC EXAM-02: SSLC ಪರೀಕ್ಷೆ-01 ರಲ್ಲಿ ಉತ್ತೀರ್ಣರಾಗದ ಹಾಗೂ SSLC ಪರೀಕ್ಷೆ-02 ಕ್ಕೆ ಹಾಜರಾಗುವ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳ ಆಯೋಜನೆಗೆ ಆದೇಶ
SSLC EXAM-02: ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ 06-05-2025 ರಂದು ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಶಿಕ್ಷಣ ಇಲಾಖೆಯ ಸಭೆಯಲ್ಲಿ, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗದ ವಿದ್ಯಾರ್ಥಿಗಳಿಗಾಗಿ ವಿಶೇಷ ತರಗತಿಗಳನ್ನು ಆಯೋಜಿಸುವ ಮಹತ್ವದ ತೀರ್ಮಾನ ಕೈಗೊಳ್ಳಲಾಯಿತು.
ಈ ನಿರ್ಧಾರವು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬಹುಮುಖ್ಯವಾಗಿದೆ, ಏಕೆಂದರೆ ಅವರ ಮುಂದಿನ ಶೈಕ್ಷಣಿಕ ಭವಿಷ್ಯ ಈ ಪರೀಕ್ಷಾ ಫಲಿತಾಂಶದ ಮೇಲೆ ಆಧಾರಿತವಾಗಿರುತ್ತದೆ.
SSLC ಪರೀಕ್ಷೆ -02 (Exam 2) 26-05-2025 ರಿಂದ 02-06-2025 ರ ವರೆಗೆ ನಡೆಯಲಿದ್ದು, ಇದನ್ನು ಲಕ್ಷದಲ್ಲಿಟ್ಟುಕೊಂಡು, 11-05-2025 ರಿಂದ 25-05-2025 ರವರೆಗೆ 15 ದಿನಗಳ ಕಾಲ ವಿಶೇಷ ತರಗತಿಗಳನ್ನು ತಾಲ್ಲೂಕುಗಳಿಂದ ಪ್ರಸ್ತಾಪಿಸಲಾದ 04 ಕೇಂದ್ರಗಳಲ್ಲಿ ಆಯೋಜಿಸುವುದು. ಈ ಕ್ರ್ಯಾಶ್ ಕೋರ್ಸ್ನಲ್ಲಿ ಎಲ್ಲಾ ವಿಷಯಗಳಿಗಾಗಿಯೂ (ಭಾಷೆಗಳು, ಗಣಿತ, ವಿಜ್ಞಾನ, ಸಮಾಜಶಾಸ್ತ್ರ) ತಜ್ಞ ಶಿಕ್ಷಕರಿಂದ ಪೂರಕ ತರಬೇತಿ ನೀಡಬೇಕು.
ಈ ತರಗತಿಗಳ ಉದ್ದೇಶ:
▪️ವಿದ್ಯಾರ್ಥಿಗಳಿಗೆ ಮನೋಬಲ ಹೆಚ್ಚಿಸಲು ಪ್ರೋತ್ಸಾಹ ನೀಡುವುದು
▪️ಪೂರಕ ಅಧ್ಯಯನದ ಮೂಲಕ ಅವರ ಪರೀಕ್ಷೆ-02ರಲ್ಲಿ ಉತ್ತೀರ್ಣಗೊಳ್ಳಲು ಸಹಾಯ ಮಾಡುವುದು.
▪️ಹಳೆಯ ತಪ್ಪುಗಳನ್ನು ಗುರುತಿಸಿ, ಸರಿಯಾದ ಮಾರ್ಗದರ್ಶನ ನೀಡುವುದು
▪️ಎಲ್ಲಾ ವಿಷಯಗಳನ್ನು ಸಮರ್ಪಕ ಕಸರತ್ತು ಮತ್ತು ಅಭ್ಯಾಸದ ಅವಕಾಶ ಕಲ್ಪಿಸುವುದು
ಈ ತರಗತಿಗಳ ಮೂಲಕ, ವಿದ್ಯಾರ್ಥಿಗಳು ಹೊಸ ಆತ್ಮವಿಶ್ವಾಸದೊಂದಿಗೆ ಪರೀಕ್ಷೆಗೆ ಸಿದ್ಧರಾಗಿ ಉತ್ತಮ ಫಲಿತಾಂಶ ಗಳಿಸಬಹುದೆಂಬ ಆಶಯವಿದೆ. ಶಾಲಾ ಮುಖ್ಯೋಪಾಧ್ಯಾಯರು, ಬಿಇಒ, ಬಿಆರ್ಸಿ, ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದರಲ್ಲಿ ಯಶಸ್ಸಿಗಾಗಿ ಸಮರ್ಪಕವಾಗಿ ಕಾರ್ಯನಿರ್ವಹಿಸಲಿದ್ದಾರೆ.
ಇದು ವಿದ್ಯಾರ್ಥಿಗಳ ಪ್ರಗತಿಯ ಹಿನ್ನಡೆಯಲ್ಲ, ಬದಲಾಗಿ ಅವರ ಮುಂದಿನ ಜೀವನದ ಮುನ್ನಡೆಯಾಗಲಿ ಎಂಬ ಉದ್ದೇಶದಿಂದ ಕಲ್ಪಿಸಲಾದ ಶೈಕ್ಷಣಿಕ ಸಹಾಯವಾಗಿದೆ.
ವಿಶೇಷ ತರಗತಿಗಳ ಅವಧಿ: 11-05-2025 ರಿಂದ 25-05-2025
ಸಮಯ: ಪ್ರತಿದಿನ ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 2:00 ರವರೆಗೆ
ಸ್ಥಳಗಳು: ಬೀದರ್ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಪ್ರತಿ ತಾಲ್ಲೂಕಿಗೆ 4 ಕೇಂದ್ರಗಳಂತೆ ಒಟ್ಟು 20 ಕೇಂದ್ರಗಳು.
ವಿಷಯಗಳು: ಪ್ರಥಮ ಭಾಷೆ, ದ್ವಿತೀಯ ಭಾಷೆ, ತೃತೀಯ ಭಾಷೆ, ಗಣಿತ, ವಿಜ್ಞಾನ, ಸಾಮಾಜ ವಿಜ್ಞಾನ
ಗುರಿ: ಎಸ್ಎಸ್ಎಲ್ಸಿ ಪರೀಕ್ಷೆ-01 ನ್ನ ಪೂರ್ಣಗೊಳಿಸದ ವಿದ್ಯಾರ್ಥಿಗಳಿಗೆ ಎಲ್ಲಾ ವಿಷಯಗಳ ಪುನರಾವರ್ತಿತ ಅಧ್ಯಯನದ ಅವಕಾಶ.
ವೇಳಾ ಪಟ್ಟಿಯಂತೆ ವಿಶೇಷ ತರಗತಿಗಳು ಆಯೋಜಿಸಲು ಕೆಳಕಂಡಂತೆ ಕ್ರಮವಹಿಸುವುದು.
▪️ವಿಶೇಷ ತರಗತಿಗಳನ್ನು ಅನುಬಂಧದಲ್ಲಿ ನೀಡಲಾದ ವೇಳಾಪಟ್ಟಿಯಂತೆ ಹಾಗೂ ಕೇಂದ್ರಗಳಲ್ಲಿ ಆಯೋಜಿಸುವುದು. (ಭಾನುವಾರಗಳನ್ನು ಒಳಗೊಂಡಂತೆ)
ಈ ಕುರಿತು ನಾಳೆ ತಾಲ್ಲೂಕಿನ ಎಲ್ಲಾ ಮುಖ್ಯ ಶಿಕ್ಷಕರ ಸಭೆಯನ್ನು ಆಯೋಜಿಸಿ ಮಾಹಿತಿ ನೀಡುವುದು ಹಾಗೂ ಎಲ್ಲಾ ವಿದ್ಯಾರ್ಥಿಗಳು ತರಗತಿಗಳಲ್ಲಿ ಹಾಜರಾಗುವಂತೆ ಕ್ರಮ ವಹಿಸುವುದು.
▪️ಪ್ರತಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಸಿಆರ್ಪಿಗಳು ವಿದ್ಯಾರ್ಥಿಗಳು ಹಾಜರಾಗುವಂತೆ ಕ್ರಮವಹಿಸುವುದು.
▪️ತರಗತಿಗಳು ಸಮರ್ಪಕವಾಗಿ ನಡೆಯುವಂತೆ ಬಿಇಒ, ಬಿಆರ್ಸಿ ವೀಕ್ಷಣೆ ಮಾಡಬೇಕು.
▪️ಪ್ರತಿ ವಿಷಯಕ್ಕೆ 01 ರಂತೆ ಅತ್ಯುತ್ತಮ ಶಿಕ್ಷಕರನ್ನು ಆಯ್ಕೆ ಮಾಡಿ ಈ ವಿಶೇಷ ತರಗತಿಗಳನ್ನು ನಿಗದಿತ ವೇಳಾ ಪಟ್ಟಿಯಂತೆ ವಿಳಂಬ ಮಾಡದೆ ಪ್ರಾರಂಭಗೊಳಿಸಲು ಕ್ರಮ ವಹಿಸುವುದು.
▪️ತರಗತಿಗಳ ವೇಳಾ ಪಟ್ಟಿ ಹಾಗೂ ನಿಯೋಜಿಸಲಾದ ಸಂಪನ್ಮೂಲ್ ಶಿಕ್ಷಕರ ಮಾಹಿತಿಯನ್ನು ಈ ಕಛೇರಿಗೆ ಸಲ್ಲಿಸುವುದು.
▪️ತರಗತಿಗಳ ಹಾಜರಾತಿಯನ್ನು ಕಡ್ಡಾಯವಾಗಿ ನಿರ್ವಹಿಸುವುದು.
▪️ಈ ತರಗತಿಗಳ ಕೇಂದ್ರ ಮುಖ್ಯಸ್ಥರನ್ನಾಗಿ ತರಗತಿ ಕೇಂದ್ರಗಳ ಮುಖ್ಯಶಿಕ್ಷಕರನ್ನು ನೇಮಿಸುವುದು.
▪️ಪ್ರತಿ ಕೇಂದ್ರಕ್ಕೆ 01 ರಂತೆ ನೋಡಲ್ ಅಧಿಕಾರಿಗಳನ್ನು ನೇಮಿಸುವುದು.
▪️ತರಗತಿಗಳ ಮೇಲ್ವಿಚಾರಣೆಯನ್ನು ಕ್ಷೇತ್ರಶಿಕ್ಷಣಾಧಿಕಾರಿಗಳು ವಹಿಸುವುದು.
▪️ಪ್ರತಿ ಹಾಜರಾದ ವಿದ್ಯಾರ್ಥಿಗಳ ಫೋಟೊ ಸಹಿತ ವರದಿಯನ್ನು ತಾಲ್ಲೂಕು SSLC ನೋಡಲ್ ಅಧಿಕಾರಿಗಳು ಜಿಲ್ಲಾ ಕಛೇರಿಗೆ ರವಾನಿಸುವುದು.
▪️ತರಗತಿಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರಿಗೆ ನೀಡಬಹುದಾದ ಗೌರವಧನ ಹಾಗೂ ಇಲಾಖಾ ಸವಲತ್ತುಗಳನ್ನು ನಿಯಮಾನುಸಾರ ನೀಡಲಾಗುವುದು.


