SSLC RESULT-2025: SSLC ಫಲಿತಾಂಶ ಕುಸಿತ ಕಂಡ ಶಾಲೆಗಳ ಶಿಕ್ಷಕರ ವೇತನ ಕಡಿತ!

SSLC RESULT-2025: SSLC ಫಲಿತಾಂಶ ಕುಸಿತ ಕಂಡ ಶಾಲೆಗಳ ಶಿಕ್ಷಕರ ವೇತನ ಕಡಿತ! ಅನುದಾನಿತ ಶಾಲೆಯ ಶಿಕ್ಷಕರಿಗೆ ಈ ಕ್ರಮ ಅನ್ವಯ: ಸರ್ಕಾರ ಸೂಚನೆ ಸರ್ಕಾರಿ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಇಲಾಖೆ ನೋಟಿಸ್‌ ಜಾರಿ.

 

SSLC RESULT-2025: SSLC ಪರೀಕ್ಷೆ ಯಲ್ಲಿ ಸತತ 2 ವರ್ಷಗಳಿಂದ ನಿರೀಕ್ಷಿತ ಫಲಿತಾಂಶ ಬಾರದಿರುವುದನ್ನು ಗಂಭೀರ ವಾಗಿ ಪರಿಗಣಿಸಿರುವ ಶಾಲಾ ಶಿಕ್ಷಣ ಇಲಾಖೆಯು ಇದೀಗ ಅನುದಾನಿತ ಶಾಲಾ ಶಿಕ್ಷಕರಿಗೆ, ಸರ್ಕಾರಿ ಪ್ರೌಢ ಶಾಲಾ ಮುಖ್ಯೋಪಾಧ್ಯಯರಿಗೆ ಮುಟ್ಟಿಸಿದೆ. ಅನುದಾನಿತ ಶಾಲೆಗಳ ವಿಷಯ ಶಿಕ್ಷಕರ ವೇತನ ಕಡಿತ ಕೈಗೊಳ್ಳಲು ಮುಂದಾಗಿದ್ದರೆ, ‘ಕರ್ತವ್ಯ ನಿಲಕ್ಷ್ಯ ಹಿನ್ನೆಲೆಯಲ್ಲಿ ನಿಮ್ಮ ಮೇಲೆ ಏಕೆ ಕ್ರಮ ಕೈಗೊಳ್ಳಬಾರದು ಎಂದು ಪ್ರಶ್ನಿಸಿ ಸ ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಿಗೆ ನೋಟಿಸ್‌ ಅನ್ನು ಜಾರಿ ಮಾಡಲಾಗಿದೆ.

ಈ ಸಲದ SSLC ಪರೀಕ್ಷೆಯಲ್ಲಿ ಶೇ.62.14 ಫಲಿತಾಂಶ ಬಂದಿತ್ತು. ಅನುದಾನಿತ ಶಾಲೆಗಳ ಒಟ್ಟು ರಿಸಲ್ಸ್‌ ಶೇ.58.97 ಮಾತ್ರವಿದ್ದರೆ, ಸರ್ಕಾರಿ ಶಾಲೆಗಳು ಶೇ.62.7, ಖಾಸಗಿ ಶಾಲೆಗಳು ಶೇ. 75.59 ಫಲಿತಾಂಶ ಪಡೆದಿವೆ. ಈ ಫಲಿತಾಂಶವನ್ನು ಹೋಲಿಸಿದಾಗ ಅನುದಾನಿತ ಶಾಲೆಗಳಲ್ಲಿ ಫಲಿತಾಂಶ ಕಡಿಮೆ ಬಂದಿದೆ. ಈ ಹಿನ್ನೆಲೆಯಲ್ಲಿ 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.60ಕ್ಕಿಂತ ಕಡಿಮೆ ಫಲಿತಾಂಶ ಪಡೆದಿರುವ ಅನುದಾನಿತ ಶಾಲೆಗಳ ಮುಖ್ಯಸ್ಥರ ವಿರುದ್ದ ನೋಟಿಸ್ ನೀಡಿದ್ದು, ಶಿಕ್ಷಕರ ವೇತನ ಕಡಿತಕ್ಕೆ ಕ್ರಮ ಕೈಗೊಳ್ಳಲು ಇಲಾಖೆ ಮುಂದಾಗಿದೆ.

 

ಯಾಕೆ ಕ್ರಮ ಕೈಗೊಳ್ಳಲಾಗುತ್ತಿದೆ?

▪️ಹೈಸ್ಕೂಲ್ ಶಾಲೆಗಲ್ಲಿ 3 ವರ್ಷಗಳಲ್ಲಿ ವಿಷಯ ಶಿಕ್ಷಣದಲ್ಲಿ ಕಡಿಮೆ ಫಲಿತಾಂಶ ಬಂದರೆ ಕ್ರಮ

▪️ಸತತ 5 ವರ್ಷ ಶೇ.50 ಫಲಿತಾಂಶ ಬಾರದ ಶಾಲೆಗೆ ಅನುದಾನವೇ ಬಂದ್

▪️ಸತತ 2 ವರ್ಷಗಳಿಂದ ನಿರೀಕ್ಷಿತ ಫಲಿತಾಂಶ ಬಾರದ್ದರಿಂದ ಕಠಿಣ ಕ್ರಮ ಕೈಗೊಂಡ ರಾಜ್ಯ ಸರ್ಕಾರ

 

ಅನುದಾನ ಕಡಿತಕ್ಕೆ ಏನೇನು ಸೂಚನೆ ನೀಡಲಾಗಿದೆ.?

ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲಿ ವಿಷಯವಾರು ಫಲಿತಾಂಶವನ್ನು ಪರಿಗಣಿಸಿ, ಶೇ.60ಕ್ಕಿಂತ ಕಡಿಮೆ ಫಲಿತಾಂಶವನ್ನು ಪಡೆದಿರುವ ವಿಷಯ ಶಿಕ್ಷಕರನ್ನು ಗುರುತಿಸಿ ಅಂಥವರ ವಾರ್ಷಿಕ ವೇತನ ಬಡ್ತಿಯನ್ನು ತಡೆಹಿಡಿ ಯುವುದು. ಅನುದಾನ ಪಡೆಯುತ್ತಿರುವ ವಿಷಯ ಶಿಕ್ಷಕರು ನಿರಂತರ 3 ವರ್ಷಗಳಲ್ಲಿ ಶೇ.60ಕ್ಕಿಂತ ಕಡಿಮೆ ಫಲಿತಾಂಶ ನೀಡಿದರೆ ಅಂಥ ವಿಷಯ ಶಿಕ್ಷಕರ ವೇತನವನ್ನು ತಡೆಹಿಡಿಯುವುದು ಮುಂತಾದ ಕ್ರಮವನ್ನು ಕೈಗೊಳ್ಳುವಂತೆ ಪ್ರೌಢಶಿಕ್ಷಣ ಇಲಾಖೆಯ ನಿರ್ದೇಶಕರು ಉಪನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ. ಸತತ 5 ವರ್ಷಗಳಲ್ಲಿ ಶೇ.50ರಷ್ಟು ಫಲಿತಾಂಶ ಬಾರದ ಶಾಲೆಗಳ  ಅನುದಾನವನ್ನು ತಡೆಹಿಡಿಯುವುದು. ಖಾಲಿ ಹುದ್ದೆಗೆ ನೇಮಕವಾಗಿರೋ ವಿಷಯ ಶಿಕ್ಷಕರ ವಿಷಯದಲ್ಲಿ ಶೇ.60ರಷ್ಟು ಫಲಿತಾಂಶ ಬಾರದೇ ಇದ್ದರೆ ಶಿಕ್ಷಕರ ವಾರ್ಷಿಕ ವೇತನವನ್ನು ತಡೆಹಿಡಿಯುವುದು. 3 ವರ್ಷ ಸತತವಾಗಿ ಫಲಿತಾಂಶ ಕಡಿಮೆ ಬಂದರೆ ವೇತನಾನುದಾನ ಕಡಿತ ಮಾಡುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುವಂತೆಯೂ ಸೂಚಿಸಿದ್ದಾರೆ.

ಸೂಚನೆ ಪಾಲನೆಯಲ್ಲಿ ಲೋಪ:

SSLC ಪರೀಕ್ಷೆಯ ಫಲಿತಾಂಶವನ್ನು ಅವಲೋಕನ ಮಾಡಿದಾಗ ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲಿನ ವಿದ್ಯಾರ್ಥಿಗಳ ಶೇಕಡಾವಾರು ಫಲಿತಾಂಶ ಕಡಿಮೆಯಾಗಿರುವುದು ಕಂಡುಬಂದಿದೆ. 2024-25ರ ಶೈಕ್ಷಣಿಕ ವರ್ಷದ ಆರಂಭದಲ್ಲೇ ಗುಣಾತ್ಮಕ ಫಲಿತಾಂಶಕ್ಕಾಗಿ, ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಗುರುತಿಸಿ ಸುಧಾರಣೆಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿತ್ತು.

ಆದರೆ, ಇದರ ಪಾಲನೆಯಲ್ಲಿ ಲೋಪವಾಗಿರುವುದರಿಂದ ಫಲಿತಾಂಶ ಕುಸಿತವಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯು ಅಭಿಪ್ರಾಯಪಟ್ಟಿದೆ.

ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾ ಧ್ಯಯರಿಗೆ ಆಯುಕ್ತರಿಂದಲೇ ನೋಟಿಸ್‌ !:

ಈ ಹಿನ್ನೆಲೆಯಲ್ಲಿ ಕೆಲ ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಯರಿಗೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರೇ ಖುದ್ದು ನೋಟಿಸ್ ನೀಡಿದ್ದು, ನಿಮ್ಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಸುಧಾರಣೆ, ಕಲಿಕೆಯ ಮಟ್ಟ ಉನ್ನತಗೊಳಿಸುವ ಕ್ರಮಗಳನ್ನು ಕೈಗೊಳ್ಳದಿರುವುದು ಫಲಿತಾಂಶದಿಂದ ಕಂಡು ಬಂದಿರುತ್ತದೆ. ನಿಮ್ಮ ಈ ಧೋರಣೆ ಕರ್ತವ್ಯದಲ್ಲಿ ನಿರ್ಲಕ್ಷ್ಯತೆ ಮತ್ತು ಕರ್ತವ್ಯ ಲೋಪವನ್ನು ತೋರಿಸುತ್ತಿದೆ. ಶೈಕ್ಷಣಿಕವಾಗಿ ಶಾಲೆಯ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ SSLC  ಪರೀಕ್ಷಾ ಫಲಿತಾಂಶ ಉತ್ತಮ ಪಡಿಸುವಲ್ಲಿ ಸರಿಯಾದ ಮಾರ್ಗದರ್ಶನವನ್ನು ನೀಡದೇ ಕರ್ತವ್ಯ ನಿರ್ಲಕ್ಷತೆ ತೋರಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಾರೆ.

ಆದ್ದರಿಂದ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳ ಅಡಿಯಲ್ಲಿ ನೋಟಿಸ್ ಜಾರಿಗೊಳಿಸಿದ್ದು, ಈ ಕರ್ತವ್ಯ ನಿರ್ಲಕ್ಷತೆಗೆ ಏಕೆ? ‘ಕರ್ತವ್ಯ ನಿಲಕ್ಷ್ಯ. ಹಿನ್ನೆಲೆಯಲ್ಲಿ ನಿಮ್ಮ ಮೇಲೆ ಏಕೆ ಕ್ರಮ ಕೈಗೊಳ್ಳಬಾರದು ಎಂದು ಪ್ರಶ್ನಿಸಿದ್ದಲ್ಲದೆ, ಶಾಲಾ ಮುಖ್ಯಸ್ಥರಿಂದ ಲಿಖಿತ ಸಮಜಾಯಿಷಿಯನ್ನು 7 ದಿನಗಳೊಳಗಾಗಿ ಶಾಲಾ ಶಿಕ್ಷಣ ಇಲಾಖೆ ಕಚೇರಿಗೆ ಸಲ್ಲಿಸುವಂತೆ ಶಾಲಾ ಶಿಕ್ಷಣ ಆಯುಕ್ತ ಡಾ. ತ್ರಿಲೋಕಚಂದ್ರ ಕೆ.ವಿ. ನೋಟಿಸ್‌ನಲ್ಲಿ ಸೂಚಿಸಿದ್ದಾರೆ.

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!