Pratibha karanji/Kalotsava-2025-26 ಪ್ರತಿಭಾಕಾರಂಜಿ/ಕಲೋತ್ಸವ ಕಾರ್ಯಕ್ರಮ ಅನುಷ್ಠಾನಗೊಳಿಸುವ ಬಗ್ಗೆ
Pratibha karanji/Kalotsava-2025-26– ಪ್ರತಿಭಾ ಕಾರಂಜಿ ಸ್ಪರ್ಧೆಯನ್ನು 2002ನೇ ಸಾಲಿನಿಂದ ಹಮ್ಮಿಕೊಳ್ಳಲಾಗುತ್ತಿದ್ದು, ಈ ಕಾರ್ಯಕ್ರಮವು ಶಿಕ್ಷಣ ಕ್ಷೇತ್ರದಲ್ಲಿ ಕಲೆಗಳನ್ನು ಉತ್ತೇಜಿಸುವ ಮೂಲಕ ಶಾಲಾ ವಿದ್ಯಾರ್ಥಿಗಳ ಕಲಾತ್ಮಕ ಪ್ರತಿಭೆಯನ್ನು, ಸೃಜನಾತ್ಮಕ ಕೌಶಲ್ಯಗಳನ್ನು ಹೊರತರಲು ಉತ್ತಮ ವೇದಿಕೆಯಾಗಿದೆ.
ಉಲ್ಲೇಖಿತ ಆದೇಶ/ಪತ್ರಗಳಂತೆ 2025-26ನೇ ಸಾಲಿನಲ್ಲಿ ರಾಜ್ಯವಲಯದ ಮುಂದುವರೆದ ಯೋಜನಾ ಕಾರ್ಯಕ್ರಮದಡಿಯಲ್ಲಿ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲಾಮಕ್ಕಳಿಗೆ (1 ರಿಂದ 10ನೇ ತರಗತಿ) ಏಕ ರೀತಿಯ ಸಾಂಸ್ಕೃತಿಕ, ಶೈಕ್ಷಣಿಕ ಸ್ಪರ್ಧೆಗಳನ್ನು ಮತ್ತು 09 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ, ಕಲೋತ್ಸವ ಸ್ಪರ್ಧೆಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಸ್ಪರ್ಧೆಗಳನ್ನು ನಡೆಸುವ ವಿಧಾನ ಕುರಿತಂತೆ ಲಗತ್ತಿಸಿರುವ ಅನುಬಂಧ-1 2 3 ಹಾಗೂ 4 ರಲ್ಲಿ ವಿವರಿಸಲಾಗಿದ್ದು ಅದರಂತೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ಮತ್ತು (ಅಭಿವೃದ್ಧಿ). ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಎಲ್ಲಾ ಹಂತದ ಅಧಿಕಾರಿಗಳು ಸಮುದಾಯದ ಸಹಕಾರದೊಂದಿಗೆ ಸ್ಥಳೀಯ ಹಬ್ಬದ ರೀತಿಯಲ್ಲಿ ಉತ್ತಮವಾಗಿ ಆಯೋಜಿಸಲು ಸೂಚಿಸಿದೆ.
ಸ್ಪರ್ಧೆಗಳ ಆಯೋಜನೆ ಮತ್ತು ಸ್ಪರ್ಧಾ ನಿಯಮಗಳು:
ಇದು ಮಹತ್ವದ ಕಾರ್ಯಕ್ರಮವಾಗಿದ್ದು, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕ ವಾಗಿರುವುದರಿಂದ ಶಾಲಾ ಹಂತದಲ್ಲಿ ಹೆಚ್ಚು ಮಕ್ಕಳು ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕು.
▪️ಎಲ್ಲಾ ವಿಭಾಗಗಳಲ್ಲಿ ವಿದ್ಯಾರ್ಥಿಗಳು ವೈಯಕ್ತಿಕ ವಿಭಾಗದಲ್ಲಿ ಯಾವುದಾದರೂ 2 ವಿಷಯಗಳಲ್ಲಿ ಮಾತ್ರ ಮತ್ತು ಸಾಮೂಹಿಕ ವಿಭಾಗದಲ್ಲಿ ಯಾವುದಾದರೂ 1 ವಿಷಯದಲ್ಲಿ ಮಾತ್ರ ಭಾಗವಹಿಸಲು ಅವಕಾಶವಿದೆ.
▪️ಯಾವುದೇ ವೈಯಕ್ತಿಕ ಹಾಗೂ ಸಾಮೂಹಿಕ ವಿಭಾಗದ ಸ್ಪರ್ಧಾ ವಿಷಯದಲ್ಲಿ ಕನಿಷ್ಠ 3 ವಿದ್ಯಾರ್ಥಿಗಳು/ 3 ಗುಂಪುಗಳು ಭಾಗವಹಿಸಬೇಕು. ಭಾಷಾ ಅಲ್ಪ ಸಂಖ್ಯಾತ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ನಿಗಧಿ ಇರುವುದಿಲ್ಲ. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸ್ಪರ್ಧೆ ನಡೆಸಿ, ಬಹುಮಾನ ಘೋಷಣೆ ಮಾಡಿ ಉಳಿದ ಮೊತ್ತವನ್ನು ಸರ್ಕಾರದ ಲೆಕ್ಕಶೀರ್ಷಿಕೆ ಜಮಾ ಮಾಡುವುದು. ಇದು ಎಲ್ಲಾ ಹಂತದ /ವಿಭಾಗಗಳ ಸ್ಪರ್ಧೆಗಳಿಗೂ ಅನ್ವಯಿಸುತ್ತದೆ.
▪️”ಚಿತ್ರಕಲಾ ಸ್ಪರ್ಧೆಗೆ ಸಂಬಂಧಿಸಿದಂತೆ ಬಣ್ಣ, ಬ್ರಷ್ ಇತ್ಯಾದಿಗಳನ್ನು ಸ್ಪರ್ಧಾಳುಗಳೇ ತರಬೇಕು. ಸಂಘಟಕರು ಕಡ್ಡಾಯವಾಗಿ ಸ್ಪರ್ಧಿಗಳಿಗೆ ಒಂದೇ ಅಳತೆಯ ಡ್ರಾಯಿಂಗ್ ಶೀಟ್ ನೀಡುವುದು.
▪️ಜಾನಪದ ನೃತ್ಯ ಕೋಲಾಟ ಇವುಗಳಿಗೆ ಉಡುವು, ವರ್ಣಾಲಂಕಾರ, ಪಕ್ಕವಾದ್ಯ, ಹಾಡುಗಾರಿಕೆ ಇವುಗಳನ್ನು ಸ್ಪರ್ಧಾರ್ಥಿಗಳೇ ಒದಗಿಸಿಕೊಳ್ಳಬೇಕು.
▪️ಕ್ಷೇ ಮಾಡಲಿಂಗ್ ಗೆ ಜೇಡಿ ಮಣ್ಣನ್ನು ಸ್ಪರ್ಧಾಳುಗಳೇ ತರಬೇಕು.
▪️ರಂಗೋಲಿ ಸ್ಪರ್ಧೆಗೆ ವಸ್ತುಗಳನ್ನು ಸ್ಪರ್ಧಾಳುಗಳೇ ತರಬೇಕು.
▪️ಸ್ಪರ್ಧೆಗಳ ದಿನಾಂಕ ಮತ್ತು ಇನ್ನಿತರ ವಿವರಗಳನ್ನು ನಿಗಧಿ ಪಡಿಸಿರುವಂತೆ ಎಲ್ಲಾ ಶಾಲೆಗಳಿಗೂ ಸಾಕಷ್ಟು ಮುಂಚಿತವಾಗಿ ಸುತ್ತೋಲೆಗಳನ್ನು ಕಳುಹಿಸಿ, ಅರ್ಹ ವಿದ್ಯಾರ್ಥಿಗಳು ಈ ಅವಕಾಶದಿಂದ ವಂಚಿತರಾಗದಂತೆ ಎಚ್ಚರ ವಹಿಸಬೇಕು.
▪️ಸ್ಪರ್ಧೆಗಳನ್ನು ನಡೆಸಿದ ಕೂಡಲೇ ಮುಂದಿನ ಹಂತದ ಸ್ಪರ್ಧೆಗೆ ಸಹಾಯವಾಗುವಂತೆ ನಿಗಧಿಪಡಿಸಿದ ದಿನಾಂಕದೊಳಗೆ ವಿಜೇತರ ಪಟ್ಟಿಯನ್ನು ತಕ್ಷಣವೇ ಕ್ರೋಢೀಕರಿಸಿ ಸಂಬಂಧಿಸಿದವರಿಗೆ ಕಳುಹಿಸಬೇಕು.
▪️ಸಂಗೀತ ಸ್ಪರ್ಧೆಗಳಿಗೆ ಸಂಬಂಧಿಸಿದಂತೆ ಶೃತಿ ವಾದ್ಯವನ್ನು ಹೊರತುಪಡಿಸಿ, ಯಾವುದೇ ವಾದ್ಯ ಗಳನ್ನು ಬಳಸಲು ಅವಕಾಶವಿಲ್ಲ. ಭರತನಾಟ್ಯ ಹಾಗೂ ಜಾನಪದ ನೃತ್ಯಕ್ಕೆ ಮುದ್ರಿತ ಧ್ವನಿ ಸುರುಳಿಯನ್ನು ಅವಕಾಶ ನೀಡುವುದು.
▪️ಜಾನಪದ ನೃತ್ಯದಲ್ಲಿ ಜಾನಪದ ಶೈಲಿಯ ನೃತ್ಯವನ್ನೇ ಪ್ರದರ್ಶಿಸಬೇಕು. ಸ್ಪರ್ಧೆಗಳಲ್ಲಿ ರಾಜ್ಯದ ಬುಡಕಟ್ಟು, ಜಾನಪದ ಮತ್ತು ಪಾರಂಪರಿಕ ಕಲಾ ಪ್ರಕಾರಗಳನ್ನು ಒಳಗೊಂಡಂತೆ ಪ್ರದರ್ಶಿಸಬೇಕು. ಉದಾ: ನಂದಿಕೋಲು ಕುಣಿತ, ಪೂಜಾ ಕುಣಿತ, ಡೊಳ್ಳು ಕುಣಿತ, ಗಾಂಜೀಪಾ ಕಲೆ, ಯಕ್ಷಗಾನ ಕಲೆ, ಗೊರವರ ಕುಣಿತ, ಐತಿಹಾಸಿಕ ನಾಟಕ, ವೀರಗಾಸೆ, ಬಯಲಾಟ, ಮುಂತಾದವುಗಳನ್ನು ಆಯ್ಕೆ ಮಾಡಿಕೊಳ್ಳತಕ್ಕದ್ದು.
▪️ವೈಯಕ್ತಿಕ ಹಾಗೂ ಸಾಮೂಹಿಕ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ/ತಂಡವನ್ನು ಮುಂದಿನ ಸ್ಪರ್ಧೆಗೆ ಆಯ್ಕೆ ಮಾಡುವುದು. ಮೇಲಿನ ಎಲ್ಲಾ ನಿಯಮಗಳು ತಾಲ್ಲೂಕು ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಹಾಗೂ 3 ವಿಭಾಗಗಳಿಗೂ ಅನ್ವಯಿಸುತ್ತದೆ.
▪️ಸಂಗೀತ ಸ್ಪರ್ಧೆಗಳಿಗೆ ಸಂಬಂಧಿಸಿದಂತೆ ಶೃತಿ ವಾದ್ಯವನ್ನು ಹೊರತುಪಡಿಸಿ, ಯಾವುದೇ ವಾದ್ಯ ಗಳನ್ನು ಬಳಸಲು ಅವಕಾಶವಿಲ್ಲ. ಭರತನಾಟ್ಯ ಹಾಗೂ ಜಾನಪದ ನೃತ್ಯಕ್ಕೆ ಮುದ್ರಿತ ಧ್ವನಿ ಸುರುಳಿಯನ್ನು ಅವಕಾಶ ನೀಡುವುದು.
▪️ಜಾನಪದ ನೃತ್ಯದಲ್ಲಿ ಜಾನಪದ ಶೈಲಿಯ ನೃತ್ಯವನ್ನೇ ಪ್ರದರ್ಶಿಸಬೇಕು. ಸ್ಪರ್ಧೆಗಳಲ್ಲಿ ರಾಜ್ಯದ ಬುಡಕಟ್ಟು, ಜಾನಪದ ಮತ್ತು ಪಾರಂಪರಿಕ ಕಲಾ ಪ್ರಕಾರಗಳನ್ನು ಒಳಗೊಂಡಂತೆ ಪ್ರದರ್ಶಿಸಬೇಕು.
▪️ಉದಾ: ನಂದಿಕೋಲು ಕುಣಿತ, ಪೂಜಾ ಕುಣಿತ, ಡೊಳ್ಳು ಕುಣಿತ, ಗಾಂಜೀಪಾ ಕಲೆ, ಯಕ್ಷಗಾನ ಕಲೆ, ಗೊರವರ ಕುಣಿತ, ಐತಿಹಾಸಿಕ ನಾಟಕ, ವೀರಗಾಸೆ, ಬಯಲಾಟ, ಮುಂತಾದವುಗಳನ್ನು ಆಯ್ಕೆ ಮಾಡಿಕೊಳ್ಳತಕ್ಕದ್ದು.
▪️ವೈಯಕ್ತಿಕ ಹಾಗೂ ಸಾಮೂಹಿಕ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ/ತಂಡವನ್ನು ಮುಂದಿನ ಸ್ಪರ್ಧೆಗೆ ಆಯ್ಕೆ ಮಾಡುವುದು. ಮೇಲಿನ ಎಲ್ಲಾ ನಿಯಮಗಳು ತಾಲ್ಲೂಕು ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಹಾಗೂ 3 ವಿಭಾಗಗಳಿಗೂ ಅನ್ವಯಿಸುತ್ತದೆ.
1 ರಿಂದ 4 ನೇತರಗತಿ: ವೈಯಕ್ತಿಕ ಸ್ಪರ್ಧೆಗಳು-20



ಸಂಘಟಣಾ ಸಮಿತಿ:
ಸಂಘಟನೆಯಲ್ಲಿ ಯಾವುದೇ ಲೋಪದೋಷ ಬಾರದಂತೆ ಸಮಿತಿಯು ಎಚ್ಚರವಹಿಸಬೇಕು.
ಬ್ಲಾಕ್ ಸಂಘಟನಾ ಸಮಿತಿಯಲ್ಲಿ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾಮಟ್ಟದ ಸಮಿತಿಯಲ್ಲಿ ಸಂಸದರು/ಉಸ್ತುವಾರಿ ಮಂತ್ರಿ/ ಜಿಲ್ಲಾ ಮಂತ್ರಿಯವರು ಅಧ್ಯಕ್ಷರಾಗಿರುತ್ತಾರೆ.
ರಾಜ್ಯ ಮಟ್ಟದ ಸಮಿತಿಯಲ್ಲಿ ಮಾನ್ಯ ಶಿಕ್ಷಣ ಸಚಿವರು ಅಧ್ಯಕ್ಷರಾಗಿರುತ್ತಾರೆ.
ಆಯಾ ಹಂತದಲ್ಲಿನ ಪ್ರಧಾನ ಅಧಿಕಾರಿಗಳು, ಪ್ರತಿಷ್ಠಿತ ವ್ಯಕ್ತಿಗಳು ಸದಸ್ಯರಾಗಿರುವ ಈ ಸಮಿತಿಗೆ ಬ್ಲಾಕ್ ಮಟ್ಟದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯವರು, ಜಿಲ್ಲಾ ಮಟ್ಟದಲ್ಲಿ ಉಪನಿರ್ದೇಶಕರು (ಆಡಳಿತ) ಹಾಗೂ ರಾಜ್ಯ ಮಟ್ಟದಲ್ಲಿ ನಿರ್ದೇಶಕರು, ಮೈನಾರಿಟಿ ರವರು ಅನುಷ್ಠಾನಾಧಿಕಾರಿಯಾಗಿರುತ್ತಾರೆ.
ವಿವಿಧ ಸಮಿತಿಗಳು:
ಸಂಘಟನಾ ಸಮಿತಿಯು ಈ ಕೆಳಕಂಡ ಸಮಿತಿಗಳನ್ನು ರಚಿಸಿ, ಆಯಾ ಕ್ಷೇತ್ರದಲ್ಲಿ ಅನುಭವವಿರುವ ಕ್ರಿಯಾಶೀಲ ವ್ಯಕ್ತಿಗಳನ್ನೇ ಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯರುಗಳಾಗಿ ನೇಮಕ ಮಾಡಬೇಕು. ಸಮಿತಿಗಳಿಗೆ ನಿರ್ದಿಷ್ಟ ಕಾರ್ಯಭಾರಗಳನ್ನು ವಹಿಸಿ, ಸಕಾಲದಲ್ಲಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದು.
ಸ್ವಾಗತ ಸಮಿತಿ, ಕ್ರಿಯಾ ಸಮಿತಿ, ಆಹಾರ ಸಮಿತಿ ನೋಂದಣಿ ಸಮಿತಿ, ಮಕ್ಕಳ ಸುರಕ್ಷತೆ ಹಾಗೂ ರಕ್ಷಣಾ ಸಮಿತಿ, ಕಾನೂನು ಶಿಸ್ತು ಪಾಲನಾ ಸಮಿತಿ, ಸಾರಿಗೆ ಸಮಿತಿ, ವಸತಿ ಸಮಿತಿ, ರಂಗ ವೇದಿಕೆ /ಸಭಾಂಗಣ ಸಮಿತಿ, ತೀರ್ಪುಗಾರರ ಮಂಡಳಿ ಸಮಿತಿ, ಆರ್ಥಿಕ ಸಮಿತಿ, ಬೆಳಕು, ಧ್ವನಿವರ್ಧಕ, ತಾಂತ್ರಿಕ ನಿರ್ವಹಣಾ ಸಮಿತಿ, ಪ್ರಚಾರ ಸಮಿತಿ. ಇತರೆ ಅಗತ್ಯ ಸಮಿತಿಗಳು ಪ್ರಚಾರ:
ಪ್ರತಿಭಾ ಕಾರಂಜಿ/ಕಲೋತ್ಸವ ಕಾರ್ಯಕ್ರಮದ ಬಗ್ಗೆ ದಿನಪತ್ರಿಕೆ. ಆಕಾಶವಾಣಿ ಮುಂತಾದ ಪ್ರಸಾರ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ಮಾಡುವುದು.
ಕಾರ್ಯಕ್ರಮದ ಮಹತ್ವ ಹಾಗೂ ಕಾರ್ಯಕ್ರಮ ನಡೆಯುವ ದಿನಾಂಕವನ್ನು ಕಾರ್ಯಕ್ರಮ ನಡೆಸುವ ಹಿಂದಿನ ದಿನ ಸ್ಥಳೀಯ ಮಕ್ಕಳಿಂದ ಮೆರವಣಿಗೆ ಏರ್ಪಡಿಸಿ ಸಾರ್ವಜನಿಕರ ಗಮನ ಸೆಳೆಯುವುದು.
ಈ ಕಾರ್ಯಕ್ರಮವು ಕರ್ನಾಟಕ ರಾಜ್ಯದಲ್ಲಿ ಮಕ್ಕಳ ಹಬ್ಬವಾಗಿ ಆಚರಿಸುವಂತಹ ವಾತಾವರಣವನ್ನು ಪ್ರಚಾರದ ಮೂಲಕ ಕಲ್ಪಿಸಬೇಕು. ಎಲ್ಲಾ ಹಂತದ ಎಲ್ಲಾ ಸ್ಪರ್ಧೆಗಳ ಬಗ್ಗೆ, ವ್ಯಾಪಕ ಪ್ರಚಾರವನ್ನು ನೀಡಲು ಆಯಾ ಹಂತದಲ್ಲಿನ ನೋಡಲ್ ಅಧಿಕಾರಿಗಳು ಅಗತ್ಯ ಕ್ರಮವಹಿಸುವುದು.
ತೀರ್ಪುಗಾರರ ನೇಮಕ:
ತೀರ್ಪುಗಾರರ ನೇಮಕ ಒಂದು ವಿಶಿಷ್ಟವಾದುದು ಹಾಗೂ ಗಂಭೀರವಾದುದು. ಪ್ರತಿಭೆಗೆ ನ್ಯಾಯ ಒದಗಿಸುವ ಉತ್ಕೃಷ್ಟ ಮನೋಭಾವ ಮತ್ತು ಆಯಾ ಕ್ಷೇತ್ರಗಳಲ್ಲಿ ಜ್ಞಾನ, ಅನುಭವವುಳ್ಳವರನ್ನು ನೇಮಿಸಬೇಕು.
ತೀರ್ಪುಗಾರರು ಸ್ಪರ್ಧಾರ್ಥಿಗಳ ಬಂಧುಗಳಾಗಿರಬಾರದು. ಅದೇ ಶಾಲೆಯ ಶಿಕ್ಷಕರಾಗಿರಬಾರದು. ಸರ್ಕಾರಿ/ಅನುದಾನಿತ ಶಾಲೆಗಳಲ್ಲಿ ಸಂಗೀತ, ನೃತ್ಯ ನಾಟಕ, ಚಿತ್ರಕಲೆ, ಕರಕೌಶಲ ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರನ್ನೇ ಕಡ್ಡಾಯವಾಗಿ ನೇಮಕ ಮಾಡಿಕೊಳ್ಳುವುದು ಅಂತಹ ಶಿಕ್ಷಕರು ಲಭ್ಯವಿಲ್ಲದಿದ್ದಲ್ಲಿ ವಿಷಯಕ್ಕೆ ಸಂಬಂಧಿಸಿದ ಸ್ಥಳೀಯ ಕಲಾವಿದರು ಹಾಗೂ ನಿವೃತ್ತ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದು.
ತೀರ್ಪುಗಾರರಿಂದ ತಮ್ಮ ಹತ್ತಿರದ ಬಂಧುಗಳು/ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿಲ್ಲ ಎಂಬ ಘೋಷಣಾ ಪತ್ರ ಪಡೆದುಕೊಳ್ಳಬೇಕು.
ತೀರ್ಪುಗಾರರ ಸಮಿತಿ ಸಭೆಗಳನ್ನು ನಡೆಸಿ ಎಲ್ಲರ ಅಭಿಪ್ರಾಯದೊಂದಿಗೆ ಮಾರ್ಗಸೂಚಿ ತಯಾರಿಸಿ, ಸ್ಪರ್ಧೆಗಳಲ್ಲಿ ಗಮನಿಸಬೇಕಾದ ಅಂಶಗಳನ್ನು ಹಾಗೂ ನೀಡಬೇಕಾದ ಅಂಕಗಳನ್ನು ಪಟ್ಟಿಮಾಡಿ ಪ್ರತಿ ತೀರ್ಪುಗಾರರಿಗೆ ವಿತರಿಸುವುದು,
ಅದರಂತೆ ತೀರ್ಪುಗಾರರು ಕ್ರಮವಹಿಸುವುದು, ತೀರ್ಪುಗಾರಿಕೆಯು ಪಾರದರ್ಶಕವಾಗಿರಬೇಕು. ಎಲ್ಲಾ
ವಿಷಯಗಳಲ್ಲಿಯೂ ಅಡಕವಾಗಿರುವ ಮಹತ್ವದ ಅಂಶಗಳನ್ನು ಗಮನಿಸಿ ಅಂಕ ನೀಡಬೇಕು. ಉದಾ: ಸಂಗೀತದಲ್ಲಿ ಭಾವ, ಮಾಧುರ್ಯ, ಲಯ, ತಾಳ, ಸಾಹಿತ್ಯ, ನೃತ್ಯದಲ್ಲಿ – ರಾಗ, ಲಯ, ಭಂಗಿ,ಭಾವ, ಇತ್ಯಾದಿ.
ಯಾವುದೇ ಸ್ಪರ್ಧೆಯ ತೀರ್ಪಿನ ಬಗ್ಗೆ ದೂರುಗಳು ಬಂದಲ್ಲಿ ತೀರ್ಪುಗಾರರ ಮಂಡಳಿ ಸಮಿತಿ ದೂರಿನ ಬಗ್ಗೆ, ಪರಿಶೀಲಿಸಿ ನ್ಯಾಯೋಚಿತ ನಿರ್ಣಯ ಕೈಗೊಳ್ಳುವುದು.
ತಾತ್ಕಾಲಿಕ ವೇಳಾಪಟ್ಟಿ:

ಸಾಮಾನ್ಯ ಸೂಚನೆಗಳು:
1. ಕಾರ್ಯಕ್ರಮದ ಸಂಬಂಧ ವಿದ್ಯಾರ್ಥಿಗಳಿಂದ ಯಾವುದೇ ರೀತಿಯ ಶುಲ್ಕವನ್ನು ವಸೂಲಿ ಮಾಡಬಾರದು.
2. ಅನುಬಂಧಗಳಲ್ಲಿ ನೀಡಿರುವ ಸೂಚನೆ / ವಿಶೇಷ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವುದು.
3. ತಾಲ್ಲೂಕು ಮಟ್ಟದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು (ಆಡಳಿತ) ಇವರ ನೇತೃತ್ವದಲ್ಲಿ ಸ್ಪರ್ಧೆಗಳನ್ನು ನಡೆಸುವುದು. ಸ್ಪರ್ಧೆಗಳನ್ನು ಶಾಲಾ, ಕ್ಲಸ್ಟರ್, ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಕಡ್ಡಾಯವಾಗಿ ನಡೆಸುವುದು.
4. ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಸಮಿತಿಗಳು 3 ಅಥವಾ 4 ಸಭೆಗಳನ್ನು ನಡೆಸಿ ವಿವಿಧ ಅಂಶಗಳ ಬಗ್ಗೆ ನಿರ್ಣಯ ಕೈಗೊಂಡು ಅನುಷ್ಠಾನಗೊಳಿಸುವುದು.
5. ಮಕ್ಕಳ ಸುರಕ್ಷತೆ ಹಾಗೂ ಸಾರಿಗೆ ವ್ಯವಸ್ಥೆಯಲ್ಲಿ ಅಹಿತಕರ ಘಟನೆಗಳು ಸಂಭವಿಸದಂತೆ ಮುಖ್ಯ ಶಿಕ್ಷಕರು, ಶಿಕ್ಷಕರು ಹಾಗೂ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳುವುದು. ಒಟ್ಟಾರೆ ವಿದ್ಯಾರ್ಥಿಗಳ ಸಂಪೂರ್ಣ ಜವಾಬ್ದಾರಿ ಶಿಕ್ಷಕರದ್ದೇ ಆಗಿರುತ್ತದೆ.
6. ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕಾಗಿ ರೂಪಿಸುವ ಸಮಿತಿಗಳಲ್ಲಿ ಎಲ್ಲಾ ಕ್ಷೇತ್ರದ ವ್ಯಕ್ತಿಗಳನ್ನು ಪ್ರಾತಿನಿಧಿಕವಾಗಿ ಸೇರಿಸಬೇಕು. ಉದಾ: ಸಾಹಿತಿಗಳು/ ಕಲಾವಿದರು, ಪತ್ರಿಕಾ ಸಂಪಾದಕರು ಮುಂತಾದವರು.
7. ಕೂಡಲೇ ಬ್ಲಾಕ್ ಮಟ್ಟದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಿಲ್ಲಾ ಮಟ್ಟದಲ್ಲಿ ಉಪನಿರ್ದೇಶಕರು ಕಾರ್ಯೋನ್ಮುಖರಾಗಿ ಪೂರ್ವಭಾವಿ ತಯಾರಿಯೊಂದಿಗೆ ಸಮಿತಿ ಅಧ್ಯಕ್ಷರುಗಳು, ನೋಡಲ್ ಅಧಿಕಾರಿಗಳು ಮುಂತಾದವರ ನೇಮಕ ಮಾಡಿ ಸಭೆಯನ್ನು ನಡೆಸಿ ವ್ಯವಸ್ಥಿತ ಯೋಜನೆ ರೂಪಿಸಿಕೊಳ್ಳುವುದು.
8. ಪಕ್ಷಪಾತ, ಉದಾಸೀನತೆ, ಅಸಮರ್ಥ ತೀರ್ಪುಗಾರರ ನೇಮಕ, ಸಮಯಕ್ಕೆ ಸರಿಯಾಗಿ ಮಾಹಿತಿ ನೀಡದಿರುವಿಕೆ, ಮಕ್ಕಳ ಸುರಕ್ಷತೆ ಮುಂತಾದ ವಿಷಯಗಳ ಬಗ್ಗೆ ದೂರು ಬಾರದಂತೆ ಎಚ್ಚರ ವಹಿಸುವುದು.
ವಿಶೇಷ ಸೂಚನೆಗಳು:
ಪ್ರಸಕ್ತ ಸಾಲಿನ ಪ್ರತಿಭಾ ಕಾರಂಜಿ/ಕಲೋತ್ಸವ ಕಾರ್ಯಕ್ರಮಕ್ಕೆ ಯಾವುದೇ ರೀತಿಯ ಹೆಚ್ಚಿನ ಅನುದಾನಕ್ಕೆ ಬೇಡಿಕೆ ಸಲ್ಲಿಸದೇ ಆಯಾ ತಾಲ್ಲೂಕು/ ಜಿಲ್ಲೆಗಳಿಗೆ ನಿಗಧಿಪಡಿಸಿರುವ ಮೊತ್ತಕ್ಕನುಗುಣ ವಾಗಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಯಾವುದೇ ಕುಂದುಕೊರತೆ, ದೂರುಗಳಿಗೆ ಅವಕಾಶ ನೀಡದೆ ನಿಗದಿತ ಕಾಲಮಿತಿಯೊಳಗೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವುದು.
ಉಪನಿರ್ದೇಶಕರು ಹಾಗೂ ಪ್ರಭಾರಾಧಿಕಾರಿಗಳು ಶಿಕ್ಷಕರ ಕಲ್ಯಾಣನಿಧಿ, ಬೆಂಗಳೂರು ಇವರಿಂದ ಪ್ರತಿ ಕ್ಲಸ್ಟರ್ ಹಂತದ ಸ್ಪರ್ಧೆಯ ಆಯೋಜನೆಗೆ ರೂ. 6,000/-ಗಳನ್ನು ನೀಡಲಾಗುವುದು. (ಆಯೋಜನೆ/ಬಹುಮಾನ/ಪ್ರಶಸ್ತಿ ಪತ್ರ/ಇತರೆ ವೆಚ್ಚ) ನಿಯಮಾನುಸಾರ ಖರ್ಚು ಭರಿಸುವುದು (ಕಛೇರಿ ಟಿಪ್ಪಣಿ ಮಾನ್ಯ ಆಯುಕ್ತರಿಂದ ಅನುಮೋದಿಸಲ್ಪಟ್ಟಿದೆ)