ಸ್ವಾವಲಂಬಿ ಸಾರಥಿ ಯೋಜನೆ: ವಾಹನ ಖರೀದಿ ಮಾಡಲು ಸಿಗಲಿದೆ ₹3 ಲಕ್ಷ ಸಹಾಯಧನ, ಈ ತರಹ ಅರ್ಜಿ ಸಲ್ಲಿಕೆ ಮಾಡಿ.
ಸ್ವಾವಲಂಬಿ ಸಾರಥಿ ಯೋಜನೆ: ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ 2025-26ನೇ ಸಾಲಿಗೆ ವಿವಿಧ ಯೋಜನೆಗಳ ಅಡಿಯಲ್ಲಿ ಸಾಲ ಸೌಲಭ್ಯಗಳನ್ನು ಪಡೆಯುವುದಕ್ಕಾಗಿ ಸೇವಾ ಸಿಂಧು ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಸ್ವಾವಲಂಬಿ ಯೋಜನೆ ಅಡಿಯಲ್ಲಿ ವಾಹನ ಸಾಲ ಸೌಲಭ್ಯವನ್ನು ಪಡೆಯಲು ಮೂರು ಲಕ್ಷ ಸಹಾಯವನ್ನು ಡಿ ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಮೂರು ಲಕ್ಷ ರೂಪಾಯಿ ಸಹಾಯಧನವನ್ನು ನೀಡಲಾಗುತ್ತಿದೆ ಅರ್ಹ ಅಭ್ಯರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು
ನಿಗದಿ ಮಾಡಲಾದ ಅರ್ಹತಾ ಮಾನದಂಡಗಳು ಈ ಕೆಳಗಿನಂತಿವೆ
▪️ವಯೋಮಿತಿ: ಕನಿಷ್ಠ 21 ವರ್ಷ, ಗರಿಷ್ಠ 45 ವರ್ಷ ವಯೋಮಿತಿ ಹೊಂದಿರಬೇಕು
▪️ಆದಾಯ ಮಿತಿ:
ಗ್ರಾಮಾಂತರ ಪ್ರದೇಶದಲ್ಲಿ: ವಾರ್ಷಿಕ ₹98,000 ಒಳಗಿರಬೇಕು
ನಗರ ಪ್ರದೇಶದಲ್ಲಿ: ವಾರ್ಷಿಕ ₹1,20,000 ಒಳಗೆ ಇರಬೇಕು
ಚಾಲನಾ ಪರವಾನಗಿ ಹೊಂದಿರಬೇಕು:
ಸರಿಯಾಗಿ ಲಘು ವಾಹನ ಚಾಲನಾ ಪರವಾನಗಿ ಹೊಂದಿರಬೇಕು ಹಾಗೂ ಈ ಹಿಂದೆ ಯಾವುದೇ ಸರ್ಕಾರಿ ಯೋಜನೆಯಿಂದ ಲಾಭ ಪಡೆದಿರಬಾರದು
▪️ಈ ಯೋಜನೆಗೆ ಅವಶ್ಯಕ ದಾಖಲೆಗಳು.
1.ಜಾತಿ ಹಾಗೂ ಆದಾಯ ಪ್ರಮಾಣಪತ್ರ
2.ಆಧಾರ್ ಕಾರ್ಡ್
3.ಚಾಲನಾ ಪರವಾನಗಿ ಪ್ರತಿ ( ಡ್ರೈವಿಂಗ್ ಲೈಸೆನ್ಸ್ )
4.ರಾಷ್ಟ್ರೀಕೃತ ಬ್ಯಾಂಕ್ ಪಾಸ್ ಬುಕ್ ನಕಲು
4.ವಾಹನದ ಅಂದಾಜು ಕ್ವೊಟೇಶನ್/ಬೆಲೆಪಟ್ಟಿ
5.ಸ್ವಯಂ ಘೋಷಣಾ ಪತ್ರ

ಅರ್ಜಿ ಸಲ್ಲಿಕೆ ಮಾಡುವ ವಿಧಾನ.
Seva Sindhu ಪೋರ್ಟಲ್ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕು.
ಆಫ್ಲೈನ್ ಮೂಲಕ ಅರ್ಜಿ ಸಲ್ಲಿಕೆ:
ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲಿ
ಹೆಚ್ಚಿನ ಮಾಹಿತಿಗಾಗಿ 080-22374832 8050770004 / 8050770005 ಸಂಪರ್ಕಿಸಬಹುದಾಗಿದೆ.