Jnana Setu programme-2025-26: ಜ್ಞಾನಸೇತು ಕಾರ್ಯಕ್ರಮವನ್ನು ಖಾನ್ ಅಕಾಡೆಮಿ ಸಹಯೋಗದಲ್ಲಿ ಅನುಷ್ಠಾನಗೊಳಿಸಲು ಅನುಮೋದನೆ.

Jnana Setu programme-2025: ಜ್ಞಾನಸೇತು ಕಾರ್ಯಕ್ರಮವನ್ನು ಖಾನ್ ಅಕಾಡೆಮಿ ಸಹಯೋಗದಲ್ಲಿ ಅನುಷ್ಠಾನಗೊಳಿಸಲು ಅನುಮೋದನೆ.

Jnana Setu programme-2025: 2025-26ನೇ ಸಾಲಿನ ಆಯವ್ಯಯ ಭಾಷಣ ಕಂಡಿಕೆ ಸಂಖ್ಯೆ: 111(vii) ‘ಜ್ಞಾನಸೇತು’ ಕಾರ್ಯಕ್ರಮವನ್ನು ಖಾನ್ ಅಕಾಡೆಮಿ ಸಹಯೋಗದಲ್ಲಿ ಅನುಷ್ಠಾನಗೊಳಿಸಲು ಅನುಮೋದನೆ ನೀಡುವ ಕುರಿತು..

ಪ್ರಸ್ತಾವನೆ:

ಖಾನ್ ಅಕಾಡೆಮಿ ಇಂಡಿಯಾ ಒಂದು ಲಾಭರಹಿತ ಸಂಸ್ಥೆಯಾಗಿದ್ದು, ಕಲಿಕೆಯಲ್ಲಿ ಆಸಕ್ತಿ ಉಳ್ಳವರಿಗೆ ವಿಶ್ವದರ್ಜೆಯ ಶಿಕ್ಷಣವನ್ನು ಒದಗಿಸುವ ಧೇಯವನ್ನು ಹೊಂದಿರುತ್ತದೆ. ಹಾಗೂ ಕಲಿಯುವವರಿಗೆಲ್ಲರಿಗೂ ಇದು ಉಚಿತವಾಗಿದೆ.

ಭಾರತೀಯ ಶಿಕ್ಷಣಕ್ಕೆ ಅನುಗುಣವಾಗಿ NCERT ಪಠ್ಯಕ್ರಮ ಆಧಾರಿತ 1 ರಿಂದ 10ನೇ ತರಗತಿ ಹಾಗೂ ಪ್ರಥಮ ಮತ್ತು ದ್ವಿತೀಯ ಪಿಯುಸಿ ಸೇರಿದಂತೆ ಆಯ್ದ ವಿಷಯಗಳು ಸಂಪೂರ್ಣ ಉಚಿತವಾಗಿ ಲಭ್ಯವಿದೆ. ಈ ವಿಷಯಗಳನ್ನು ಈಗಾಗಲೇ ಕರ್ನಾಟಕದಲ್ಲಿ NCERT ಪಠ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ತರಗತಿಗಳಲ್ಲಿ ಬೋಧನೆ ಮಾಡಲಾಗುತ್ತಿದೆ.

ಖಾನ್ ಅಕಾಡೆಮಿ,ಇಂಡಿಯಾದ ಉಚಿತ ಸಂಪನ್ಮೂಲಗಳೊಂದಿಗೆ ವಿದ್ಯಾರ್ಥಿಗಳ ಕಲಿಕೆಯನ್ನು ಬೆಂಬಲಿಸಿ ಮತ್ತು ಆನ್‌ಲೈನ್ ಕಲಿಕೆಯನ್ನು ಸಂತಸದಾಯಕ ಮತ್ತು ಪರಿಣಾಮಕಾರಿಯಾಗಿಸಿ ತ್ವರಿತ ಪ್ರಾರಂಭಿಕ ಮಾರ್ಗದರ್ಶಿಗಳು, ವೆಬಿನಾರ್‌ಗಳು ಮತ್ತು ಕಲಿಕಾ ಯೋಜನೆಗಳಿಗೆ ಪ್ರವೇಶ ಒದಗಿಸುತ್ತದೆ.

ಎಲ್ಲಾ ವಿದ್ಯಾರ್ಥಿಗಳಿಗೆ ತರಗತಿಯ ಹೊರಗಡೆಯು ಸಹ ಕಲಿಕೆಯ ಪುನರ್‌ಬಲನ ಹಾಗೂ ಶಿಕ್ಷಕರಿಗೆ ಖಾನ್ ಅಕಾಡೆಮಿ ಇಂಡಿಯಾ ಜಾಲತಾಣದ ಮೂಲಕ ಲಾಗಿನ್ ಆಗಲು ಹಾಗೂ ಮೊಬೈಲ್ APP ಮೂಲಕ ಲಾಗಿನ್ ಆಗಲು ಸಂಪೂರ್ಣ ಉಚಿತವಾಗಿರುತ್ತದೆ.

8, 9 & 10ನೇ ತರಗತಿಯ ಹಾಗೂ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಅವರ ಕಲಿಕಾ ಸಾಧನಗಳನ್ನು ಹೆಚ್ಚಿಸಲು ಮತ್ತು 6, 7, 8, 9, 10ನೇ ತರಗತಿಯ & ಪ್ರಥಮ-ದ್ವಿತೀಯ ಪಿಯುಸಿ ತರಗತಿಗಳಲ್ಲಿ ಬೋಧಿಸುತ್ತಿರುವ ಶಿಕ್ಷಕರು/ಉಪನ್ಯಾಸಕರಿಗೆ ‘ಖಾನ್‌ಮಿಗೊ’ ಕೃತಕ ಬುದ್ಧಿಮತ್ತೆ (Khanmigo Artificial Intelligence) ಬಳಕೆಯನ್ನು ಸಂಪೂರ್ಣ ಉಚಿತವಾಗಿ ನೀಡಲಾಗುವುದು. ಪ್ರತಿ ಶನಿವಾರದಂದು ಒಂದು ಬೋಧನಾ ಅವಧಿಯನ್ನು ಖಾನ್ ಅಕಾಡೆಮಿ ಇಂಡಿಯಾ ಮೂಲಕ Science, Tenchnology, Engineering, Arts and Mathematics (STEAM) 2 ನಿಗಧಿಪಡಿಸಬಹುದಾಗಿರುತ್ತದೆ.

ಮೇಲೆ ಓದಲಾದ ಕ್ರಮಾಂಕ (1) ರಲ್ಲಿನ 2025-26ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಸಂಬಂಧಿಸಿದಂತೆ ಕಂಡಿಕೆ 111(vii) ರಲ್ಲಿ ‘ಜ್ಞಾನಸೇತು’ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಬಗ್ಗೆ ಘೋಷಿಸಲಾಗಿರುತ್ತದೆ.

ಮೇಲೆ ಓದಲಾದ ಕ್ರಮಾಂಕ (2) ರಲ್ಲಿನ ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ ಇವರ ಪ್ರಸ್ತಾವನೆಯಲ್ಲಿ 2025-2026ನೇ ಸಾಲಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ವಿಜ್ಞಾನ ಮತ್ತು ಗಣಿತ ವಿಷಯಗಳ ಬೋಧನಾ ವಿಧಾನದಲ್ಲಿ ನಾವೀನ್ಯತೆ ಅಳವಡಿಸಿಕೊಳ್ಳುವಿಕೆ. ಈ ಉದ್ದೇಶದೊಂದಿಗೆ ಖಾನ್ ಅಕಾಡೆಮಿಯಲ್ಲಿ ಲಭ್ಯವಿರುವ ಡಿಜಿಟಲ್ ಸಂಪನ್ಮೂಲಗಳನ್ನು ಮತ್ತು ಅಭ್ಯಾಸಗಳನ್ನು ಬಳಸಿಕೊಂಡು ಪರಿಣಾಮಕಾರಿ ಕಲಿಕೆಯನ್ನು ಹೊಂದುವ ಸಲುವಾಗಿ ರಾಜ್ಯದ ಶಾಲಾ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ಸರ್ಕಾರಿ ಶಾಲೆಗಳಲ್ಲಿ 6 ರಿಂದ 10ನೇ ತರಗತಿವರೆಗೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಡಿಜಿಟಲ್ ಕಲಿಕೆಗಾಗಿ ಅಲ್ಲದೇ ಸದರಿ ವಿಷಯಗಳನ್ನು ಸಂಪೂರ್ಣವಾಗಿ ಅಧ್ಯಯಿಸಿಸಲು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಲ್ಗೊಳ್ಳಲು ಮತ್ತು ಉತ್ತಮ ದರ್ಜೆಯನ್ನು ಪಡೆಯಲು ಖಾನ್ ಅಕಾಡೆಮಿ ಇಂಡಿಯಾ (KAI) ರವರ ಆನ್‌ಲೈನ್ ಕಲಿಕಾ ವ್ಯವಸ್ಥೆಯು ಸಂಪೂರ್ಣವಾಗಿ ಅನುಕೂಲವಾಗುತ್ತದೆ.

ಈ ಹಿನ್ನೆಲೆಯಲ್ಲಿ ಖಾನ್ ಅಕಾಡೆಮಿ ಇಂಡಿಯಾ ರವರ ಸಹಯೋಗದೊಂದಿಗೆ ‘ಜ್ಞಾನಸೇತು’ ಎಂಬ ಕಾರ್ಯಕ್ರಮವನ್ನು 2025-26ನೇ ಸಾಲಿನಿಂದ ಅನುಷ್ಠಾನಗೊಳಿಸಲು ಪ್ರಸ್ತಾವನೆಯನ್ನು ಸಲ್ಲಿಸಲಾಗಿರುತ್ತದೆ.

ಕಾರ್ಯಕ್ರಮದ ಉದ್ದೇಶಗಳು:

1. ಖಾನ್ ಅಕಾಡೆಮಿಯಲ್ಲಿ ಲಭ್ಯವಿರುವ 6ನೇ ತರಗತಿಯಿಂದ 12ನೇ ತರಗತಿವರೆಗಿನ ಡಿಜಿಟಲ್ ಸಂಪನ್ಮೂಲಗಳನ್ನು ಮತ್ತು ಅಭ್ಯಾಸಗಳನ್ನು ಶಾಲಾ ಶಿಕ್ಷಣ ಇಲಾಖೆಯ ಶಾಲಾ/ಕಾಲೇಜುಗಳಲ್ಲಿನ ಕಲಿಕಾ ಬೋಧನೆ ಚಟುವಟಿಕೆಗಳೊಂದಿಗೆ ಸಮ್ಮಿಳಿತಗೊಳಿಸುವುದು.

2. 8, 9 & 10ನೇ ತರಗತಿಯ ಹಾಗೂ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಅವರ ಕಲಿಕಾ ಸಾಧನಗಳನ್ನು ಹೆಚ್ಚಿಸಲು ಮತ್ತು 6, 7, 8, 9, 10ನೇ ತರಗತಿಯ & ಪ್ರಥಮ-ದ್ವಿತೀಯ ಪಿಯುಸಿ ತರಗತಿಗಳಲ್ಲಿ ಬೋಧಿಸುತ್ತಿರುವ ಶಿಕ್ಷಕರು/ಉಪನ್ಯಾಸಕರಿಗೆ ಅವರ ತರಗತಿ ಬೋಧನೆಯಲ್ಲಿ ಪಾಠ ಯೋಜನೆ, ಪ್ರಶ್ನೆ ಪತ್ರಿಕೆ ಮತ್ತು ರಸಪ್ರಶ್ನೆಗಳನ್ನು ಸಿದ್ಧಪಡಿಸಿ ಪರಿಣಾಮಕಾರಿ ತರಗತಿ ಪ್ರಕ್ರಿಯೆಗಳನ್ನು ನಡೆಸಲು ಅನುವಾಗುವಂತೆ Khanmigo Al ಒಳಗೊಂಡಂತೆ ಪೂರಕ ಬೋಧನಾ ಉಪಕರಣಗಳನ್ನು (Teaching tools) ನೀಡುವುದು.

3. ಸ್ವವೇಗದೊಂದಿಗೆ ವೈಯಕ್ತಿಕವಾಗಿ ಕಲಿಯಲು ಅನುವಾಗುವಂತೆ ಸಂಪನ್ಮೂಲಗಳನ್ನು ವಿದ್ಯಾರ್ಥಿಗಳಿಗೆ ನೀಡುವುದು.

4. CET, JEE, NEET, CLAT, CUET & CA ಪ್ರವೇಶ ಪರೀಕ್ಷೆಗಳಿಗೆ & ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದು.

5. ಡಿಜಿಟಲ್ ಕಲಿಕಾ ಅಭ್ಯಾಸಗಳನ್ನು ಮತ್ತು ಶೈಕ್ಷಣಿಕ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನೀಡುವುದು.

ಯೋಜನೆಯ ವ್ಯಾಪ್ತಿ:

A. ಪಠ್ಯಕ್ರಮ ಆಧಾರಿತ ಪೂರಕ ಅಧ್ಯಯನ (6 ರಿಂದ 10ನೇ ತರಗತಿಗೆ):

ಗಣಿತ ಮತ್ತು ವಿಜ್ಞಾನ:

NCERT ಪಠ್ಯಕ್ರಮಕ್ಕೆ ಹೊಂದಾಣಿಕೆಯಾಗುವಂತೆ ಖಾನ್ ಅಕಾಡೆಮಿಯ ವೀಡಿಯೋಗಳು ಹಾಗೂ ಅಭ್ಯಾಸಗಳನ್ನು ಬಳಸಿಕೊಳ್ಳುವುದು.

ಇಂಗ್ಲಿಷ್ ಮತ್ತು ಇತರ ವಿಷಯಗಳು:

Reading Comprehension ಮತ್ತು ಬುನಾದಿ ಸಾಕ್ಷರತಾ ಸಾರ್ಮಥ್ಯ್ರಗಳನ್ನು ಬಳಸಿಕೊಳ್ಳುವುದು.

ಶಿಕ್ಷಕರ ಸಬಲೀಕರಣ:

ಖಾನ್ ಅಕಾಡೆಮಿಯನ್ನು ಶಿಕ್ಷಕರು ಡಿಜಿಟಲ್ ಬೋಧನಾ ಉಪಕರಣವಾಗಿ ಮತ್ತು ಪಾಠ ಯೋಜನೆಗಳಲ್ಲಿ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಸಾಮರ್ಥ್ಯ ಅಭಿವೃದ್ಧಿ ತರಬೇತಿಯನ್ನು ನೀಡುವುದು.

B. ಪದವಿ ಪೂರ್ವ ಶಿಕ್ಷಣ (11-12ನೇ ತರಗತಿ):

▪️ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಅರ್ಥಶಾಸ್ತ್ರ ಮತ್ತು ಇಂಗ್ಲಿಷ್ ವಿಷಯಗಳಿಗೆ ಖಾನ್ ಅಕಾಡೆಮಿಯಲ್ಲಿ ಲಭ್ಯವಿರುವ ಡಿಜಿಟಲ್ ಸಂಪನ್ಮೂಲಗಳನ್ನು ಪದವಿಪೂರ್ವ ಶಿಕ್ಷಣದಲ್ಲಿ ಪೂರಕವಾಗಿ ಬಳಸುವುದು.

▪️NCERT ಪಠ್ಯಕ್ರಮಕ್ಕೆ ಸಮನ್ವಯಗೊಳಿಸಿರುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗಾಗಿ ಮತ್ತು ಪರೀಕ್ಷಾ ಮಂಡಳಿಯ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದು.

C. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ:

CET, JEE, NEET: ಖಾನ್ ಅಕಾಡೆಮಿಯ ಅಭ್ಯಾಸ ಮಾದರಿಗಳು, ಪರಿಕಲ್ಪನಾ ವೀಡಿಯೋಗಳು ಮತ್ತು ಪರೀಕ್ಷಾ ಉಪಕರಣಗಳನ್ನು ಬಳಸುವುದು.

CLAT ಮತ್ತು CA ಫೌಂಡೇಶನ್:

ಪ್ರವೇಶ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ Logical reasoning, Reading comprehension, Basic math & Financial literacy ವಿಷಯಗಳಿಗೆ ಸಂಬಂಧಿಸಿದಂತೆ ಲಭ್ಯವಿರುವ ಡಿಜಿಟಲ್ ಸಂಪನ್ಮೂಲಗಳನ್ನು ಬಳಸುವುದರ ಮೂಲಕ ನೆರವಾಗುವುದು.

▪️ಖಾನ್ ಅಕಾಡೆಮಿಯನ್ನು ಡಿಜಿಟಲ್ ಸಂಪನ್ಮೂಲ ಬ್ಯಾಂಕ್ ರೀತಿಯಲ್ಲಿ ಪದವಿಪೂರ್ವ ಶಿಕ್ಷಣ ಸಂಸ್ಥೆಗಳು ಪದವಿ ಕಾಲೇಜುಗಳೊಂದಿಗೆ ಸಹಭಾಗಿತ್ವವನ್ನು ಹೊಂದಿ ಅಧ್ಯಯನ ವಲಯ (Study Circle) ಗಳನ್ನು ನಿರ್ಮಿಸುವುದು.

D. ಅನುಷ್ಠಾನ ಕಾರ್ಯತಂತ್ರ:

1. ಶಾಲೆಗಳಲ್ಲಿ ಅನುಷ್ಠಾನ

2025-26ನೇ ಸಾಲಿನಲ್ಲಿ 21726 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ 6 ರಿಂದ 8ನೇ ತರಗತಿ, 4871 ಸರ್ಕಾರಿ ಪ್ರೌಢಶಾಲೆಗಳ 8 ರಿಂದ 10ನೇ ತರಗತಿಗಳಲ್ಲಿ ಮತ್ತು 1229 ಸರ್ಕಾರಿ ಪದವಿಪೂರ್ವ ಕಾಲೇಜುಗಳ ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳಲ್ಲಿ ಅನುಷ್ಠಾನಗೊಳಿಸಲಾಗುವುದು.

▪️ಶಾಲೆಗಳಲ್ಲಿ ಈಗಾಗಲೇ ಲಭ್ಯವಿರುವ ಸ್ಮಾರ್ಟ್ ಬೋರ್ಡ್ ಅಥವಾ LED Projectorಗಳನ್ನು ಬಳಸಿಕೊಳ್ಳುವುದು.

▪️ಇಂಟರ್ನೆಟ್ ಸಂಪರ್ಕ ಹೊಂದಿರುವ ಲ್ಯಾಪ್ ಟಾಪ್/ಟ್ಯಾಬ್ಲೆಟ್ ಅಥವಾ ಕಂಪ್ಯೂಟರ್ ಲ್ಯಾಬ್‌ಗಳನ್ನು ಬಳಸಿಕೊಳ್ಳುವುದು.

2. ಶಿಕ್ಷಕ ತರಬೇತಿ

▪️ಕಾರ್ಯಾಗಾರ ಮತ್ತು ವೆಬಿನಾರ್‌ಗಳ ಮೂಲಕ ಖಾನ್ ಅಕಾಡೆಮಿ ಇಂಡಿಯಾದಲ್ಲಿ ಲಭ್ಯವಿರುವ ಡಿಜಿಟಲ್ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬೋಧನ ಕಲಿಕಾ ಪ್ರಕ್ರಿಯೆಗಳಲ್ಲಿ ಬಳಸುವ ಬಗ್ಗೆ, ಶಿಕ್ಷಕರಿಗೆ/ಉಪನ್ಯಾಸಕರಿಗೆ ತರಬೇತಿ.

▪️ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಪ್ರತಿ ಬ್ಲಾಕ್‌ನಲ್ಲೂ ಡಿಜಿಟಲ್ ಮೆಂಟರ್‌ಗಳನ್ನು ಶಿಕ್ಷಕರಿಗೆ ನೆರವು ನೀಡಲು ನಿಯೋಜಿಸುವುದು.

3. ವಿದ್ಯಾರ್ಥಿಗಳ ಭಾಗವಹಿಸುವಿಕೆ

▪️ಶಾಲಾ/ಕಾಲೇಜುಗಳ ವೇಳಾಪಟ್ಟಿಯಲ್ಲಿ ವಾರದಲ್ಲಿ ಒಂದು ಅವಧಿಯನ್ನು ಖಾನ್ ಅಕಾಡೆಮಿಯ ಅಧ್ಯಯನಕ್ಕಾಗಿ ನಿಗದಿಪಡಿಸುವುದು.

▪️ಸಮವಯಸ್ಕ ಅಧ್ಯಯನ (Peer learning) ದ ಅವಧಿಗಳಿಗಾಗಿ ಡಿಜಿಟಲ್ ಅಧ್ಯಯನ ತಂಡಗಳನ್ನು ರೂಪಿಸುವುದು.

▪️ಉತ್ತಮ ಪ್ರಗತಿಯನ್ನು ಸಾಧಿಸುವ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವುದು.

4. ಮೌಲ್ಯಮಾಪನ ಮತ್ತು ಮೇಲ್ವಿಚಾರಣೆ:

▪️ಖಾನ್ ಅಕಾಡೆಮಿಯ ಡ್ಯಾಶ್ ಬೋರ್ಡ್‌ಗಳ ಮೂಲಕ ವಿದ್ಯಾರ್ಥಿ ಮತ್ತು ಶಿಕ್ಷಕರ ಬಳಕೆಯ ದತ್ತಾಂಶ, ವಿದ್ಯಾರ್ಥಿಗಳ ಪ್ರಗತಿ ಮತ್ತು ಕಲಿಕೆಯ ಮಟ್ಟಗಳನ್ನು ತರಗತಿಯಿಂದ ರಾಜ್ಯ ಹಂತದ ವರಗೆ ಅನುಸರಣೆ ಮಾಡುವುದು.

▪️ಕಾರ್ಯಕ್ರಮದ ಮೌಲ್ಯಮಾಪನಕ್ಕಾಗಿ ಮೂರನೇ ವ್ಯಕ್ತಿ ಸಂಸ್ಥೆಯನ್ನು ನೇಮಿಸುವುದು.

▪️ರಾಜ್ಯದ 21726 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 4871 ಸರ್ಕಾರಿ ಪ್ರೌಢಶಾಲೆಗಳಲ್ಲಿ ಮತ್ತು 1229 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಅಧ್ಯಯನ ಮಾಡುತ್ತಿರುವ ಸುಮಾರು 19,05,025 ಲಕ್ಷ ವಿದ್ಯಾರ್ಥಿಗಳಲ್ಲಿ ಪರಿಣಾಮಕಾರಿ ಕಲಿಕೆಯನ್ನು ಸಾಧಿಸಲು ಅನುವಾಗುವಂತೆ ‘ಜ್ಞಾನಸೇತು” ಕಾರ್ಯಕ್ರಮವನ್ನು ರೂ.540.10 ಲಕ್ಷಗಳ ಅನುದಾನದಲ್ಲಿ ಶಿಕ್ಷಕಕರು/ಉಪನ್ಯಾಸಕರಿಗೆಗೆ ತರಬೇತಿ ನೀಡಿ ಅನುಷ್ಠಾನಗೊಳಿಸಲು ಪ್ರಸ್ತಾಪಿಸಲಾಗಿದೆ.

ಮೇಲ್ಕಂಡ ಅಂಶಗಳ ಹಿನ್ನೆಲೆಯಲ್ಲಿ, ಪ್ರಸ್ತಾವನೆಯನ್ನು ಸರ್ಕಾರವು ಕೂಲಂಕಷವಾಗಿ ಪರಿಶೀಲಿಸಿ, ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಇಪಿ 127 ಯೋಸಕ 2025, ಬೆಂಗಳೂರು,ದಿನಾಂಕ:25.06.2025.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, 2025-26ನೇ ಸಾಲಿನಲ್ಲಿ “ಜ್ಞಾನಸೇತು” ಕಾರ್ಯಕ್ರಮದಡಿಯಲ್ಲಿ 26,597 ಸರ್ಕಾರಿ ಶಾಲೆಗಳಲ್ಲಿ 6 ರಿಂದ 10ನೇ ತರಗತಿಯಲ್ಲಿ ಓದುತ್ತಿರುವ ಅಂದಾಜು 15,91,647 ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ(ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ) ಮತ್ತು ಆಂಗ್ಲ ಭಾಷೆ ವಿಷಯಗಳ ಮತ್ತು 1229 ಸರ್ಕಾರಿ ಕಾಲೇಜುಗಳಲ್ಲಿ ಓದುತ್ತಿರುವ ಅಂದಾಜು 3,13,378 ವಿದ್ಯಾರ್ಥಿಗಳಿಗೆ ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಅರ್ಥಶಾಸ್ತ್ರ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಹೆಚ್ಚುವರಿ ಅಧ್ಯಯನಕ್ಕಾಗಿ ಖಾನ್ ಅಕಾಡೆಮಿಯ ಆನ್‌ಲೈನ್ ಕಲಿಕೆಯ ಸಂಪನ್ಮೂಲಗಳನ್ನು ಉಚಿತವಾಗಿ ಬಳಸಲು ಖಾನ್ ಅಕಾಡೆಮಿ ಸಹಯೋಗದೊಂದಿಗೆ ಅನುಬಂಧದಲ್ಲಿ ಲಗತ್ತಿಸಲಾಗಿರುವ 21726 ಸರ್ಕಾರಿ ಹಿರಿಯ ಪ್ರಾಥಮಿಕ, 4871 ಸರ್ಕಾರಿ ಪ್ರೌಢಶಾಲೆಗಳಲ್ಲಿ ಮತ್ತು 1229 ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವಿಕೆ.

ಖಾನ್‌ಮಿಗೊ ಕೃತಕ ಬುದ್ಧಿಮತ್ತೆ (Khanmigo Al) ತಂತ್ರಾಂಶವನ್ನು ಉಚಿತವಾಗಿ 8, 9 & 10ನೇ ತರಗತಿಯ ಹಾಗೂ ಪ್ರಥಮ ದ್ವಿತೀಯ ಪಿಯುಸಿ ತರಗತಿಯ ವಿದ್ಯಾರ್ಥಿಗಳಿಗೆ ಮತ್ತು 6, 7, 8, 9, 10ನೇ ತರಗತಿಯ & ಪ್ರಥಮ-ದ್ವಿತೀಯ ಪಿಯುಸಿ ತರಗತಿಗಳಲ್ಲಿ ಬೋಧಿಸುತ್ತಿರುವ ಶಿಕ್ಷಕರು/ಉಪನ್ಯಾಸಕರಿಗೆ ಉಚಿತವಾಗಿ ಬಳಸಲು ಹಾಗೂ ಸದರಿ ತಂತ್ರಾಂಶಗಳ ಬಳಕೆಯ ತರಬೇತಿಗಾಗಿ ರೂ.540.10 ಲಕ್ಷಗಳ ಮೊತ್ತದಲ್ಲಿ ಅನುಷ್ಠಾನಗೊಳಿಸಲು ಸಮಗ್ರ ಶಿಕ್ಷಣ ಕರ್ನಾಟಕದ ವಾರ್ಷಿಕ ಕ್ರಿಯಾ ಯೋಜನೆ ಮತ್ತು ಆಯವ್ಯಯ 2025-260 (AWP&B) ನಲ್ಲಿ State Specific Innovation (Secondary) Component ಅಡಿಯ ಅನುದಾನದಲ್ಲಿ ಈ ಕೆಳಕಂಡ ಷರತ್ತುಗಳಿಗೊಳಪಟ್ಟು ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ  ಕರ್ನಾಟಕ, ಬೆಂಗಳೂರು ಹಾಗೂ ನಿರ್ದೇಶಕರು, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಬೆಂಗಳೂರು ಇವರಿಗೆ ಈ ಕೆಳಕಂಡ ಷರತ್ತುಗಳು ಮತ್ತು ನಿಬಂಧನೆಗಳಿಗೆ ಒಳಪಟ್ಟು ಅನುಮತಿಸಿ ಆದೇಶಿಸಿದೆ.

ಯೋಜನೆಯ ಅನುಷ್ಠಾನದಲ್ಲಿ ಪಾಲಿಸಬೇಕಾಗಿರುವ ಷರತ್ತುಗಳು ಮತ್ತು ನಿಬಂಧನೆಗಳು:

▪️ನಿರ್ದೇಶಕರು (ಪದವಿ ಪೂರ್ವ) ಇವರು ನಿರ್ದೇಶಕರು, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT) ಇವರೊಂದಿಗೆ ಸಮನ್ವಯ ಸಾಧಿಸಿ ಜ್ಞಾನಸೇತು ಕಾರ್ಯಕ್ರಮವನ್ನು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಅನುಷ್ಠಾನಗೊಳಿಸುವುದು.

▪️ಶಾಲಾ/ಕಾಲೇಜು/ತಾಲೂಕು/ಜಿಲ್ಲಾ/ರಾಜ್ಯ ಹಂತದ ಪರೀಕ್ಷೆಗಳಲ್ಲಿ ಮತ್ತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಾದ CET, JEE, NEET, CLAT CUET ಮತ್ತು CA ಫೌಂಡೇಶನ್ ಪ್ರವೇಶ ಪರೀಕ್ಷೆಗಳಲ್ಲಿ ಸರ್ಕಾರಿ ಶಾಲಾ/ಕಾಲೇಜು ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ಸಾಧಿಸಲು ಅನುವಾಗುವಂತೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವುದು.

▪️6, 7, 8, 9, 10ನೇ ತರಗತಿಯ & ಪ್ರಥಮ-ದ್ವಿತೀಯ ಪಿಯುಸಿ ತರಗತಿಗಳಲ್ಲಿ ಬೋಧಿಸುತ್ತಿರುವ ಶಿಕ್ಷಕರು/ಉಪನ್ಯಾಸಕರಿಗೆ ಅವರ ತರಗತಿ ಬೋಧನೆಯಲ್ಲಿ ಪಾಠ ಯೋಜನೆ, ಮತ್ತು ರಸಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡು ಪರಿಣಾಮಕಾರಿ ತರಗತಿ ಪ್ರಕ್ರಿಯೆಗಳನ್ನು ನಡೆಸಲು ಅನುವಾಗುವಂತೆ ಖಾನ್‌ಮಿಗೊ ಕೃತಕ ಬುದ್ಧಿಮತ್ತೆ (Khanmigo Al) ಒಳಗೊಂಡಂತೆ ಪೂರಕ ಬೋಧನಾ ಉಪಕರಣಗಳನ್ನು (Teaching tools) ಬಳಸುವುದು.

▪️8, 9 & 10ನೇ ತರಗತಿಯ ಹಾಗೂ ಪ್ರಥಮ ದ್ವಿತೀಯ ಪಿಯುಸಿ ತರಗತಿಯ ವಿದ್ಯಾರ್ಥಿಗಳಿಗೆ ಖಾನ್‌ಮಿಗೊ ಕೃತಕ ಬುದ್ಧಿಮತ್ತೆ (Khanmigo Al) ಮೂಲಕ ತರಗತಿಗಳಲ್ಲಿ ಕಲಿಕಾ ಫಲಗಳನ್ನು ಸ್ವಯಂ ಕಲಿಕೆಯ ಮೂಲಕ ಸಾಧಿಸಿ ಉತ್ತಮ ಪ್ರಗತಿಯನ್ನು ಹೊಂದುವ ನಿಟ್ಟಿನಲ್ಲಿ ಕಲಿಕೆಯನ್ನು ಸುಗಮಗೊಳಿಸುವುದು.

▪️ಖಾನ್ ಅಕಾಡೆಮಿ ಇಂಡಿಯಾ ಆನ್‌ಲೈನ್ ಕಲಿಕಾ ವ್ಯವಸ್ಥೆಯಲ್ಲಿ ಸೃಜನೆಮಾಡಲಾದ ವಿದ್ಯಾರ್ಥಿಗಳ ಹಾಗೂ ಶಿಕ್ಷಕಕರ/ಉಪನ್ಯಾಸಕರ ಖಾತೆಗಳನ್ನು ಜೀವನಪರ್ಯಂತ ಉಚಿತವಾಗಿ ಬಳಸಲು ಖಾನ್ ಅಕಾಡೆಮಿ ಇಂಡಿಯಾರವರು ಕ್ರಮವಹಿಸತಕ್ಕದ್ದು.

▪️ಶಾಲಾ/ಕಾಲೇಜುಗಳ ವೇಳಾಪಟ್ಟಿಯಲ್ಲಿ ಶನಿವಾರದಂದು ಒಂದು ಅವಧಿಯನ್ನು ಖಾನ್ ಅಕಾಡೆಮಿಯ ಆನ್‌ಲೈನ್ ಸಂಪನ್ಮೂಲಗಳನ್ನು ಉಚಿತ ಬಳಕೆ/ಅಧ್ಯಯನಕ್ಕಾಗಿ ನಿಗದಿಪಡಿಸುವುದು

▪️ಶಿಕ್ಷಕರು/ಉಪನ್ಯಾಸಕರು ಸದರಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಅಂಕಿ ಅಂಶ (Data) ವನ್ನು Student Achievement Tracking System (SATS) ನಲ್ಲಿ ಹೊರತುಪಡಿಸಿ ಬೇರೆ ಯಾವುದೇ ತಂತ್ರಾಂಶದಲ್ಲಿ ನಮೂದಿಸುವಂತಿಲ್ಲ.

▪️ಮೊದಲ ಹಂತದ ಶಿಕ್ಷಕರ/ಉಪನ್ಯಾಸಕರ ತರಬೇತಿ ಅಥವಾ ಇತರೆ ತರಬೇತಿಗಳು ಸಹ ಯಾವುದೇ ಕಾರಣಕ್ಕೂ ಶಾಲೆಯ ಸಾಮಾನ್ಯ ಬೋಧನಾ ಅವಧಿಯಲ್ಲಿ ಮಾಡುವಂತಿಲ್ಲ.

ಸದರಿ ಕಾರ್ಯಕ್ರಮದ ಅನುಷ್ಠಾನದಲ್ಲಿ ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು ಮತ್ತು ನಿರ್ದೇಶಕರು, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಬೆಂಗಳೂರು ಇವರುಗಳು ಪಾಲಿಸಬೇಕಾದ ಷರತ್ತುಗಳು/ನಿಬಂಧನೆಗಳು:

1. ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು ಇವರು ಸದರಿ ಯೋಜನೆಯ ಮೇಲುಸ್ತುವಾರಿ ಪ್ರಾಧಿಕಾರವಾಗಿ ಹಾಗೂ ನಿರ್ದೇಶಕರು, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಬೆಂಗಳೂರು ಇವರು ಅನುಷ್ಠಾನಾಧಿಕಾರಿಯಾಗಿ ಕಾರ್ಯನಿರ್ವಹಿಸತಕ್ಕದ್ದು ಹಾಗೂ ಅನುದಾನದ ಸದ್ಬಳಕೆಗಾಗಿ ಸಂಪೂರ್ಣವಾಗಿ ಜವಾಬ್ದಾರರಾಗಿರುತ್ತಾರೆ.

2. ಖಾನ್ ಅಕಾಡೆಮಿ ಇಂಡಿಯಾ ಜೊತೆಗಿನ ಒಡಂಬಡಿಕೆ(MoU), ಸದರಿ ಆದೇಶದ ಪ್ರತಿ ತರಬೇತಿಯ ವಿವರಗಳು & ವೇಳಾಪಟ್ಟಿ ತರಬೇತಿ ಪಡೆದಿರುವ ಶಿಕ್ಷಕರ/ಉಪನ್ಯಾಸಕರ ವಿವರ, ಹಾಗೂ ಭೌತಿಕ ಮತ್ತು ಆರ್ಥಿಕ ಖರ್ಚು/ವೆಚ್ಚಗಳನ್ನು ಸಮಗ್ರ ಶಿಕ್ಷಣ ಕರ್ನಾಟಕ ಮತ್ತು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಗಳ ಅಧಿಕೃತ ಇಲಾಖಾ ಜಾಲತಾಣದಲ್ಲಿ ಕಡ್ಡಾಯವಾಗಿ ಪ್ರಕಟಿಸತಕ್ಕದ್ದು.

3. ಸದರಿ ಕಾರ್ಯಕ್ರಮಕ್ಕೆ ಪ್ರಸ್ತಾಪಿಸಲಾಗಿರುವ ರೂ. 540.10 ಲಕ್ಷಗಳ ಬೇಡಿಕೆ ಅನುದಾನವನ್ನು 2025-26ನೇ ಸಾಲಿನಲ್ಲಿ ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು ರವರು ಸದರಿ ಕಾರ್ಯಕ್ರಮ ಪ್ರಸ್ತಾಪಿಸಲಾಗಿರುವ Project Approval Board (PAB) ಅನುಮೋದನೆಯನ್ನು ನಿಯಮಾನುಸಾರ MRPs (Master Resource Person), ಶಿಕ್ಷಕರ ಮತ್ತುಉಪನ್ಯಾಸಕರು ತರಬೇತಿಗಾಗಿ ನಿಗದಿಪಡಿಸಲಾದ ಅನುದಾನದಲ್ಲಿ ಭರಿಸುವುದು.

4. ಸದರಿ ಕಾರ್ಯಕ್ರಮದ ಮೇಲುಸ್ತುವಾರಿಯನ್ನು ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು ಮತ್ತು ನಿರ್ದೇಶಕರು, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಬೆಂಗಳೂರು ಹಾಗೂ ಖಾನ್ ಅಕಾಡೆಮಿ ಇಂಡಿಯಾ ಸಂಸ್ಥೆಯವರು ನಿರ್ವಹಿಸುವುದು.

5. ನಿರ್ದೇಶಕರು, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಬೆಂಗಳೂರು ಇವರು ಸದರಿ ಕಾರ್ಯಕ್ರಮದ ಪರಿಣಾಮಕಾರಿ ಶಾಲಾ-ಕಾಲೇಜುವಾರು ಪ್ರಗತಿ ಕುರಿತು ಮೇಲುಸ್ತುವಾರಿ ನಡೆಸಿ ಪ್ರಗತಿಯ ವರದಿಯನ್ನು Monthly Program Implementation Calendar (MPIC) ಸಭೆಗಳಲ್ಲಿ ಮತ್ತು ರಾಜ್ಯ ಹಂತದ ಮಾಸಿಕ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಮಂಡಿಸತಕ್ಕದ್ದು.

6. “ಜ್ಞಾನ ಸೇತು” [Jnana Setu programme-2025] ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಖಾನ್ ಅಕಾಡೆಮಿ ಇಂಡಿಯಾ ಸಂಸ್ಥೆಯವರಿಗೆ ಸರ್ಕಾರದಿಂದ ಯಾವುದೇ ರೀತಿಯ ಅನುದಾನವನ್ನು ಬಿಡುಗಡೆ ಮಾಡುವಂತಿಲ್ಲ ಹಾಗೂ ಖಾನ್ ಅಕಾಡೆಮಿ ಇಂಡಿಯಾ ಸಂಸ್ಥೆಯ ಸಹಯೋಗವು ಸಂಪೂರ್ಣ ಉಚಿತವಾಗಿದ್ದು, ಸದರಿ ಸಂಸ್ಥೆಯು ಯಾವುದೇ ರೀತಿಯ ಆರ್ಥಿಕ ಹೊರೆಯನ್ನು ಸರ್ಕಾರದ ಮೇಲೆ ವಿಧಿಸುವಂತಿಲ್ಲ.

7. Education Employees Data System (EEDS) ಪೋರ್ಟಲ್ ನಲ್ಲಿ ಕಾರ್ಯಕ್ರಮದಡಿಯಲ್ಲಿ ಸಾಧಿಸಿರುವ ಆರ್ಥಿಕ ಮತ್ತು ಭೌತಿಕ ಪ್ರಗತಿ ಅಂದರೆ ರಾಜ್ಯ ಮಟ್ಟದಲ್ಲಿ 35 DIET ನೋಡಲ್ ಅಧಿಕಾರಿಗಳ MRP i.e CRP/BRP/BRCC ជា Subject Inspectors ಇವರುಗಳ ವೈಯಕ್ತಿಕ ತರಬೇತಿ ವಿವರಗಳು & ಅವರಿಗೆ ನೀಡಲಾಗಿರುವ ಪ್ರಯಾಣ ಭತ್ಯೆ ಮತ್ತು ದಿನ ಭತ್ಯೆಯನ್ನು (TA & DA) ವಿವರಗಳು ಸೇರಿದಂತೆ ಸಂಬಂಧಪಟ್ಟ ಶಿಕ್ಷಕರ/ಉಪನ್ಯಾಸಕರ ತರಬೇತಿಯ ವಿವರಗಳನ್ನು ಕಡ್ಡಾಯವಾಗಿ ನಮೂದಿಸುವುದು. ಈ ಬಗ್ಗೆ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ರವರು ಸೂಕ್ತ ಕ್ರಮವಹಿಸುವುದು.

8. ಸದರಿ ಕಾರ್ಯಕ್ರಮದ ಅನುಷ್ಠಾನದಲ್ಲಿ ಪಾಲ್ಗೊಳ್ಳುವ ಪ್ರಧಾನ ಸಂಪನ್ಮೂಲ ವ್ಯಕ್ತಿಗಳು (Master Resource Person) ಹಾಗೂ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಅರ್ಹತೆಯಂತೆ ಪ್ರಯಾಣ ಭತ್ಯೆ ಮತ್ತು ದಿನ ಭತ್ಯೆಯನ್ನು (TA ಮತ್ತು DA) ಮತ್ತು ಪ್ರಧಾನ ಸಂಪನ್ಮೂಲ ವ್ಯಕ್ತಿಗಳಿಗೆ (Master Resource Person) ಅರ್ಹತೆಯಂತೆ ಗೌರವಧನವನ್ನು Karnataka Direct Benefit Transfer (DBT) Portal ಮುಖಾಂತರ ನೇರ ನಗದು ವರ್ಗಾವಣೆ (DBT) ಮೂಲಕ ಆಧಾರ್ ಜೋಡಣೆಯಾಗಿರುವ ಅವರ ಬ್ಯಾಂಕ್ ಖಾತೆಗೆ ನೇರವಾಗಿ ಖಜಾನೆ-2 ಯಿಂದ ವರ್ಗಾಯಿಸಲು ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು ರವರು ಸೂಕ್ತ ಕ್ರಮವಹಿಸತಕ್ಕದ್ದು.

ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು ಇವರು ಸಲ್ಲಿಸಿರುವ ಪ್ರಸ್ತಾವನೆಯ ಅನ್ವಯ ಅನುಮೋದಿತ ಯೋಜನೆಯ ವೆಚ್ಚ:

ಸಮಗ್ರ ಶಿಕ್ಷಣ ಕರ್ನಾಟಕ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಮತ್ತು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ಜವಾಬ್ದಾರಿಗಳು:

1. ಜಿಲ್ಲೆ ಹಾಗೂ ಶಾಲೆ ಮತ್ತು ಕಾಲೇಜುಗಳಲ್ಲಿ ಖಾನ್ ಆಕಾಡೆಮಿ ಇಂಡಿಯಾ ಸಂಸ್ಥೆಯ ಕೆಲಸವನ್ನು ಬೆಂಬಲಿಸಿ ಸಕ್ರಿಯಗೊಳಿಸುವುದು ಮತ್ತು ಶಾಲಾ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಕಾರ್ಯಕ್ರಮಗಳಲ್ಲಿ ಅವರ ಸಕ್ರಿಯ ಭಾಗವಹಿಸುವಿಕೆಯನ್ನು ಬೆಂಬಲಿಸುವುದು.

2. ರಾಜ್ಯ ಮಟ್ಟ, ಜಿಲ್ಲಾ ಮಟ್ಟ ಮತ್ತು ಬ್ಲಾಕ್ ಮಟ್ಟದಲ್ಲಿ ಕಾರ್ಯಕ್ರಮದ ಅನುಷ್ಠಾನ ಮತ್ತು ಮೇಲುಸ್ತುವಾರಿಗಾಗಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲು ಸುತ್ತೋಲೆ/ಅಧಿಸೂಚನೆಯನ್ನು ಹೊರಡಿಸುವುದು.

3. ತರಬೇತಿಗಳು ಮತ್ತು ಆನ್‌ಲೈನ್ ಓರಿಯಂಟೇಶನ್ ಸೇರಿದಂತೆ, ರಾಜ್ಯ ಸಂಪನ್ಮೂಲ ತಂಡ (SRG) ವನ್ನು ಸ್ಥಾಪಿಸುವುದು, ಮೇಲ್ವಿಚಾರಣೆ ಮತ್ತು ಗುಣಮಟ್ಟದ ಭರವಸೆಯನ್ನು ಬೆಂಬಲಿಸುವುದು, ರಾಜ್ಯ ಮತ್ತು ಜಿಲ್ಲಾ ಮಟ್ಟದ ಪರಿಶೀಲನಾ ಸಭೆಗಳು ಮತ್ತು ಕಾರ್ಯಕ್ರಮ ಚಟುವಟಿಕೆಗಳ ಪ್ರಗತಿ ಪರಿಶೀಲನೆಯ ಜಂಟಿ ಮೇಲ್ವಿಚಾರಣೆ ಮಾಡುವುದು.

4. ಖಾನ್ ಆಕಾಡೆಮಿ ಇಂಡಿಯಾ ಸಂಸ್ಥೆಗೆ ಜ್ಞಾನಸೇತು ಕಾರ್ಯಕ್ರಮ ನಿರ್ವಹಣೆಗಾಗಿ ಮತ್ತು ಜಿಲ್ಲೆಗಳಲ್ಲಿ ಸಭೆಗಳು ಮತ್ತು ತರಬೇತಿಗಳಂತಹ ಚಟುವಟಿಕೆಗಳನ್ನು ನಡೆಸಲು ಶಾಲಾ ಶಿಕ್ಷಣ ಇಲಾಖೆಯ ಸೌಲಭ್ಯಗಳನ್ನು ಬಳಸಲು ಅನುಮತಿ ನೀಡುವುದು.

5. ಯೋಜನೆ, ಅನುಷ್ಠಾನ ಮತ್ತು ಮೇಲ್ವಿಚಾರಣೆ ಮತ್ತು ಮೌಲ್ಯಮಾಪನದಂತಹ ಸೂಕ್ತ ಚಟುವಟಿಕೆಗಳಲ್ಲಿ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳ ಒಳಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳುವುದು.

ಪ್ರಾಂಶುಪಾಲರು/ಮುಖ್ಯ ಶಿಕ್ಷಕರು ಹಾಗೂ ಉಪನ್ಯಾಸಕರು/ಸಹ ಶಿಕ್ಷಕರ ಜವಾಬ್ದಾರಿಗಳು:

1. ಪ್ರಾಂಶುಪಾಲರು/ಮುಖ್ಯ ಶಿಕ್ಷಕರು ಹಾಗೂ ಉಪನ್ಯಾಸಕರು/ಸಹ ಶಿಕ್ಷಕರು ಪೋಷಕರಿಗೆ ಕಾರ್ಯಕ್ರಮದ ವಿನ್ಯಾಸ ಹಾಗೂ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸುವುದು. ಅವರ ಮಗುವನ್ನು ಏಕೆ ಈ ಕಾರ್ಯಕ್ರಮಕ್ಕೆ ಒಳಪಡಿಸಿದೆ ಹಾಗೂ ಹೇಗೆ ಅದರ ಸಹಾಯದೊಂದಿಗೆ ಮಗುವಿನ ಕಲಿಕಾ ಮಟ್ಟವನ್ನು ಸುಧಾರಿಸಬಹುದೆಂದು ಪೋಷಕರ ಸಭೆಯಲ್ಲಿ (Parent-Teacher Meet) ತಿಳಿಸುವುದು.

2. ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಸುಧಾರಿಸಲು ತರಬೇತಿಯಲ್ಲಿ ನೀಡಿದ ಮಾಹಿತಿಯಂತೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವುದು.

ಕಾರ್ಯಕ್ರಮದ ನೋಡಲ್ ಅಧಿಕಾರಿ ಹಾಗೂ ಇತರೆ ಅಧಿಕಾರಿಗಳ ಜವಾಬ್ದಾರಿಗಳು:

1. ಎಲ್ಲಾ ಶಾಲಾ/ಕಾಲೇಜುಗಳ ಪ್ರಾಂಶುಪಾಲರು/ಮುಖ್ಯ ಶಿಕ್ಷಕರು, ಉಪನ್ಯಾಸಕರು/ಸಹ ಶಿಕ್ಷಕರು ಹಾಗೂ ಪೋಷಕರಿಗೆ ಕಾರ್ಯಕ್ರಮದ ವಿನ್ಯಾಸ ಹಾಗೂ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸುವುದು.

2. ಕಾರ್ಯಕ್ರಮವನ್ನು ನಿರ್ವಹಿಸುವ ಎಲ್ಲಾ ಉಪನ್ಯಾಸಕರು/ಸಹ ಶಿಕ್ಷಕರಿಗೆ ತರಬೇತಿ ನೀಡಿರುವ ಬಗ್ಗೆ ಖಚಿತಪಡಿಸಿ ಕೊಳ್ಳುವುದು.

3. ಶಾಲಾ/ಕಾಲೇಜುಗಳಲ್ಲಿ ಕಾರ್ಯಕ್ರಮದ ಅನುಷ್ಠಾನ ಮತ್ತು ನಿರ್ವಹಣೆಯ ಬಗ್ಗೆ ಕ್ಷೇತ್ರ ಭೇಟಿ ನೀಡುವುದರ ಮೂಲಕ ಮಾಹಿತಿ ಪಡೆದುಕೊಂಡು ಸೂಕ್ತ ಮಾರ್ಗದರ್ಶನ ನೀಡುವುದು.

4. ಅನುಷ್ಠಾನ ಮತ್ತು ನಿರ್ವಹಣೆಯಲ್ಲಿ ಸಮಸ್ಯೆಗಳಿದ್ದಲ್ಲಿ ರಾಜ್ಯ ಕಛೇರಿಯನ್ನು ಸಂಪರ್ಕಿಸಿ ಪರಿಹಾರಗಳನ್ನು ಕಂಡುಕೊಳ್ಳುವುದು.

5. ಜಿಲ್ಲಾ ಹಂತದ ಎಲ್ಲಾ ಉಸ್ತುವಾರಿ ಅಧಿಕಾರಿಗಳಿಗೆ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಿ, ಶಾಲಾ ಭೇಟಿ ಸಮಯದಲ್ಲಿ ಜ್ಞಾನಸೇತು ಕಾರ್ಯಕ್ರಮದ ಅನುಷ್ಠಾನ ಮತ್ತು ನಿರ್ವಹಣೆಯ ಬಗ್ಗೆ ಪರಿಶೀಲಿಸಿ ಮಾರ್ಗದರ್ಶನ ನೀಡುವಂತೆ ಕ್ರಮವಹಿಸುವುದು.

6. ರಾಜ್ಯ ಕಛೇರಿಯಿಂದ ನಡೆಸುವ ಸಭೆಗಳಲ್ಲಿ ಭಾಗವಹಿಸಿ ಜಿಲ್ಲೆಯ ಪ್ರಗತಿ ಬಗ್ಗೆ ವರದಿಯನ್ನು ಮಂಡಿಸುವುದು.

ಈ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಭರಿಸಲಾಗುವ ವೆಚ್ಚಗಳಿಗೆ ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು, ಇವರು ನಿಯಮಾನುಸಾರ ಲೆಕ್ಕಪತ್ರಗಳನ್ನು ಇಡತಕ್ಕದ್ದು.

ಸದರಿ ಕಾರ್ಯಕ್ರಮದ ಅಡಿಯಲ್ಲಿ ಯಾವುದೇ ರೀತಿಯ ಖರೀದಿ ಪ್ರಕ್ರಿಯೆ ಇರುವುದಿಲ್ಲ, ತರಬೇತಿಯ ಅವಧಿಯಲ್ಲಿ ಉಪಹಾರ ಪೂರೈಕೆಗೆ ಸಂಬಂಧಿಸಿದಂತೆ ಎಲ್ಲಾ ಖರೀದಿ ನಿಯಮಗಳನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ, 1999 ಮತ್ತು ಅದರಡಿಯಲ್ಲಿ ಹೊರಡಿಸಲಾದ ನಿಯಮಗಳನ್ನು ಚಾಚೂ ತಪ್ಪದೇ ಕಡ್ಡಾಯವಾಗಿ ಹಾಗೂ ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು.

ಸದರಿ ಯೋಜನೆಯ ಅನುಷ್ಠಾನಕ್ಕಾಗಿ ಆರ್ಥಿಕ ಮತ್ತು ಭೌತಿಕ ಗುರಿಗಳನ್ನು ನಿಗದಿಪಡಿಸತಕ್ಕದ್ದು ಹಾಗೂ ಅದರನ್ವಯ ಭರಿಸಲಾಗುವ ವೆಚ್ಚದ ವಿವರಗಳನ್ನು ಪ್ರತಿ ಮಾಹೆಯ 15ನೇ ತಾರೀಖಿನೊಳಗೆ New Decision Supportive System (ಅವಲೋಕನ) ತಂತ್ರಾಂಶದಲ್ಲಿ ಕಡ್ಡಾಯವಾಗಿ ಇಂದೀಕರಿಸತಕ್ಕದ್ದು.

ಈ ಆದೇಶವು ಸರ್ಕಾರವು ಆಯಾ ಸಂದರ್ಭದಲ್ಲಿ ಹೊರಡಿಸಲಾಗುವ ಆದೇಶ/ತಿದ್ದುಪಡಿ ಆದೇಶ ಮತ್ತು ಸುತ್ತೋಲೆಗಳಿಗೆ ಒಳಪಟ್ಟಿರುತ್ತದೆ.

ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 4207 ವೆಚ್ಚ-8/2025, ದಿನಾಂಕ:09.05.2025 ರಲ್ಲಿ ನೀಡಲಾದ ಸಹಮತಿ ಹಾಗೂ ಆದೇಶ ಸಂಖ್ಯೆ FD 01 TFP 2025, ದಿನಾಂಕ:02.04.2025ರಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರಿಗೆ ಪ್ರತ್ಯಾಯೋಜಿಸಿರುವ ಅಧಿಕಾರದನ್ವಯ ಹೊರಡಿಸಿದೆ.

CLICK HERE TO DOWNLOAD ORDER  

 

ಇದನ್ನೂ ನೋಡಿ……ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) 10 ನೇ ತರಗತಿಗೆ ವರ್ಷಕ್ಕೆ ಎರಡು ಬಾರಿ ಬೋರ್ಡ್ ಪರೀಕ್ಷೆಗಳನ್ನು ನಡೆಸುವ ಮಾನದಂಡಗಳನ್ನು ಅನುಮೋದಿಸಿದೆ!  

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!